ಪ್ರಜಾಸ್ತ್ರ ಸುದ್ದಿ
ಉಡುಪಿ: ಕೋಲಾರ, ಕಲಬುರಗಿ, ಉಡುಪಿ ಜಿಲ್ಲೆಗೆ ನನ್ನನ್ನು ಬ್ಯಾನ್ ಮಾಡಲಾಗಿದೆ. ಜೈಲುಗೆ ಕಳಿಸಲಾಗಿದೆ. ಇದು ಕಾಂಗ್ರೆಸ್ ಇದ್ದಾಗಲೂ ಆಗಿದೆ. ಬಿಜೆಪಿ ಇದ್ದಾಗಲೂ ಆಗುತ್ತಿದೆ. ನಮ್ಮ ಹೋರಾಟದ ಫಲ ಬಿಜೆಪಿಗೆ ಆಗುತ್ತಿದೆ ಅನ್ನೋದು ಗೊತ್ತು. ಆದರೆ, ನೀವು ಬ್ಯಾನ್ ಮಾಡುತ್ತಿರುವುದು ನನ್ನನಲ್ಲ. ಹಿಂದುತ್ವವನ್ನು ಎಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.
ಹಿಂದು ಸಿದ್ಧಾಂತದ ಮೇಲೆ ಗೆದ್ದು ಬಂದವರು ನೀವು. ಹಿಂದುಗಳನ್ನೇ ತಡೆಯುತ್ತಿದ್ದೀರಿ. 67 ವರ್ಷದಿಂದ ಹೋರಾಟ ಮಾಡುತ್ತಿದ್ದೇನೆ. ಇದಕ್ಕೆ ಬಿಜೆಪಿ ಸ್ಪಂದಿಸುತ್ತಿಲ್ಲ. ದೇಶಕ್ಕಾಗಿ ಹಿಂದು ಸಂಘಟಿಕರು ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೆ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.