ಕನ್ನಡ ಸಂಘ ಲೋಕಾರ್ಪಣೆ

363

ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಂಘ ಉದ್ಘಾಟನೆಗೊಂಡಿತು. ಯುವ ಸಾಹಿತಿ ಮನು ಪತ್ತಾರ ಕಲಕೇರಿ ಸಂಘವನ್ನ ಉದ್ಘಾಟಿಸಿದ್ರು.

ಕಾರ್ಯಕ್ರಮ ಉದ್ಘಾಟಿಸಿ ಮಾತ್ನಾಡಿದ ಮನು ಪತ್ತಾರ, ಕನ್ನಡ ಭಾಷೆ ದಿನದಿಂದ ದಿನಕ್ಕೆ ತನ್ನ ಕಳೆಯನ್ನ ಕಳೆದುಕೊಳ್ಳುತ್ತಿದೆ. ಸಾವಿರಾರು ವರ್ಷ ಇತಿಹಾಸವಿರುವ ಕನ್ನಡ ಭಾಷೆ ಪ್ರಸ್ತುತ ಅನೇಕ ತೊಂದರೆಗಳಿಗೆ ಸಿಲುಕುತ್ತಿದೆ ಅಂತಾ ಹೇಳಿದ್ರು. ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಅಶೋಕ ಬಿರಾದಾರ ಮಾತ್ನಾಡಿ, ಕನ್ನಡ ಜಾಗೃತಿಯಾಗಲು ಕನ್ನಡಿಗರೆ ಮುಂದಾಗಬೇಕು ಎಂದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಶರಣಬಸವ ಜೋಗೂರ ಅಧ್ಯಕ್ಷತೆ ವಹಿಸಿಕೊಂಡಿದ್ರು. ಕನ್ನಡ ಸಂಘದ ಅಧ್ಯಕ್ಷ ಡಿ.ಎಸ್ ಮಠಪತಿ ಪ್ರಾಸ್ತಾವಿಕವಾಗಿ ಮಾತ್ನಾಡಿದ್ರು. ಪ್ರಶಿಕ್ಷಣಾರ್ಥಿ ದ್ಯಾವಮ್ಮ ಕೇಲೋಜಿ ವೇದಿಕೆ ಮೇಲಿದ್ರು. ಈ ವೇಳೆ ಮಹಾವಿದ್ಯಾಲಯದ ಉಪನ್ಯಾಸಕರಾದ ಪಿ.ಎಂ.ಮಡಿವಾಳರ, ಜಿ.ಸಿ.ನಂದಿಕೋಲ, ಸಿದ್ದಲಿಂಗ ಕಿಣಗಿ, ಎನ್.ಬಿ.ಪೂಜಾರಿ, ಡಾ.ಶಿವಲಿಂಗಪ್ಪ ಭಂಡಾರಿ, ಸುಧಾಕರ ಚವ್ಹಾಣ, ವಿಜಯಲಕ್ಷ್ಮಿ ಭಜಂತ್ರಿ, ವಿದ್ಯಾ ಮೋಗಲಿ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!