ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಚುನಾವಣಾ ಆಯೋಗದಿಂದ ಎಲ್ಲೆಡೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಾಗಿ ಕಳೆದ 6 ದಿನಗಳಲ್ಲಿ 47.3 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಚುನಾವಣೆ ದಿನಾಂಕ ಘೋಷಣೆಗೂ ಮೊದಲು 80 ಕೋಟಿ ರೂಪಾಯಿ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಅದು ಮುಂದುವರೆದಿದ್ದು, ದಾಖಲೆ ಇಲ್ಲದ ಹಣ, ಬಂಗಾರ, ಬೆಳ್ಳಿ, ಇತರೆ ವಸ್ತುಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಪೊಲೀಸರು, ಅಬಕಾರಿ ಅಧಿಕಾರಿಗಳು ಸೇರಿ ಜಾಗೃತ ದಳದ ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಾರೆ.
ಇನ್ನು ಕಳೆದ 6 ದಿನಗಳಲ್ಲಿ ಅಂದ್ರೆ ಮಾರ್ಚ್ 29ರಿಂದ ಇಲ್ಲಿಯವರೆಗೆ ವಶಕ್ಕೆ ಪಡೆದಿರುವ ವಿವರ ಹೀಗಿದೆ.
12.82 ಕೋಟಿ ರೂಪಾಯಿ, 16.02 ಕೋಟಿ ರೂಪಾಯಿ ಮೌಲ್ಯದ 2.78 ಲಕ್ಷ ಲಕ್ಷ ಲೀಟರ್ ಮದ್ಯ, 41.26 ಲಕ್ಷ ರೂಪಾಯಿ ಮೌಲ್ಯದ 79.44 ಕೆ.ಜಿ.ಮಾದಕವಸ್ತುಗಳು, 6.72 ಕೋಟಿ ರೂಪಾಯಿ ಮೌಲ್ಯದ 13.575 ಕೆಜಿ ತೂಕದ ಚಿನ್ನ, 63.98 ಲಕ್ಷ ರೂಪಾಯಿ ಮೌಲ್ಯದ 88.763 ಕೆಜಿ ತೂಕದ ಬೆಳ್ಳಿ ಹಾಗೂ 10.79 ಕೋಟಿ ರೂಪಾಯಿ ಮೌಲ್ಯದ ವಿವಿಧ ಕೊಡುಗೆ ಸೇರಿ ಒಟ್ಟು 47.43 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.