ಚಿಕ್ಕಮಗಳೂರು: ಪ್ರವಾಹದಿಂದ ಕರ್ನಾಟಕದ ಮೂಕ್ಕಾಲು ಭಾಗ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಹೀಗಿದ್ರೂ ಕೇಂದ್ರ ಸರ್ಕಾರ ಮಾತ್ರ ಪರಿಹಾರ ಘೋಷಣೆ ಮಾದಷ್ಟು ಕಠಿಣ ಹೃದಯಿಯಾಗಿದೆ. ಇದರ ಪರಿಣಾಮ ಓರ್ವ ರೈತ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸ ಹತ್ತಿರದ ಎಸ್.ಕೆ ಮೇಗಲ್ ಗ್ರಾಮದ ರೈತ ಚಂದ್ರೇಗೌಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರವಾಹದಿಂದ ಇರೋ ಒಂದಿಷ್ಟು ಜಮೀನು ಕೊಚ್ಚಿಕೊಂಡು ಹೋಗಿತ್ತು. ಪರಿಹಾರ ಸಿಗದಿರುವುದಕ್ಕೆ ಕಂಗಾಲಾಗಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳ್ತಿದ್ದಾರೆ.
1 ಎಕರೆ 30 ಗುಂಟೆ ಭತ್ತ ಸಂಪೂರ್ಣ ನಾಶವಾಗಿತ್ತು. ಇನ್ನೊಂದು ಎಕರೆ ಕಾಫಿ ತೋಟ ಸಹ ಪ್ರವಾಹಕ್ಕೆ ಹಾಳಾಗಿ ಹೋಗಿತ್ತು. ಇದ್ರಿಂದ ಕಂಗಾಲಾಗಿ ಹೋಗಿದ್ದ ರೈತ ಚಂದ್ರೇಗೌಡ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.