ಹುಕ್ಕೇರಿ: ಕರ್ನಾಟಕದಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಗೆ ನೀರು ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಹೇಳಿದ್ದಾರೆ.
ವಿಧಾನಸಭೆಯ ಚುನಾವಣೆಯ ರ್ಯಾಲಿಯಲ್ಲಿ ಮಾತ್ನಾಡಿರುವ ಕೇಂದ್ರ ಸಚಿವರು, ಸಾಂಗ್ಲಿ ಜಿಲ್ಲೆಗೆ ಕುಡಿಯಲು ಹಾಗೂ ಕೃಷಿ ಚಟುವಟಿಕೆಗಳಿಗೆ ಕರ್ನಾಟಕದಿಂದ ನೀರನ್ನ ಒದಗಿಸಲಾಗುವುದು ಅನ್ನೋ ಭರವಸೆ ನೀಡಿದ್ದಾರೆ. ಅಲ್ದೇ, ಜಾಟ್ ನ ಕೆಲವು ಭಾಗಗಳಿಗೆ ಈಗಾಗ್ಲೇ ನೀರು ತರಲು ಯೋಜನೆ ರೂಪಿಸಲಾಗಿದೆ ಅಂತಾ ತಿಳಿಸಿದ್ದಾರೆ.
ವಿಜಯಪುರದ ತುಬ್ಜಿ ಹಾಗೂ ಬಬ್ಲೇಶ್ವರದಿಂದ ಸಾಂಗ್ಲಿಗೆ ನೀರು ಬಿಡುಗಡೆ ಮಾಡಲಾಗುತ್ತೆ. ಈ ಬಗ್ಗೆ ಮಹಾರಾಷ್ಟ್ರ ಸಿಎಂ ಫಡ್ನಾವಿಸ್ ಕರ್ನಾಟಕದ ಸಿಎಂ ಬಿ.ಎಸ್ ಯಡಿಯೂರಪ್ಪನವರ ಜೊತೆ ಮಾತುಕತೆ ನಡೆಸಿದ್ದಾರೆ ಅಂತಾ ಅಮಿತ ಶಾ ಹೇಳಿದ್ದಾರೆ. ಆದ್ರೆ, ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ನೀರು ಹಂಚಿಕೆ ವಿಚಾರಕ್ಕೆ ಗಲಾಟೆಯಿದೆ. ಹೀಗಿರುವಾಗ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನೀರು ಹರಿಸುವುದು ಅಂದ್ರೆ ಮತ್ತಷ್ಟು ತಿಕ್ಕಾಟ ನಡೆಯುವುದು ಖಂಡಿತ.