ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬುಧವಾರ ಮಧ್ಯಾಹ್ನ 3.30ರ ನಂತರ ನೂತನವಾಗಿ 7 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಆ ನೂತನ ಸಚಿವರು ಯಾರು ಆಗಲಿದ್ದಾರೆ ಅನ್ನೋದರ ಲಿಸ್ಟ್ ನ್ನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಉಮೇಶ ಕತ್ತಿ(ಹುಕ್ಕೇರಿ ಶಾಸಕ), ಎಸ್.ಅಂಗಾರ(ಸುಳ್ಯ ಶಾಸಕ), ಎಂಟಿಬಿ ನಾಗರಾಜ(ವಿಧಾನ ಪರಿಷತ್ ಸದಸ್ಯ), ಸಿ.ಪಿ ಯೋಗೇಶ್ವರ(ವಿಧಾನ ಪರಿಷತ್ ಸದಸ್ಯ), ಅರವಿಂದ ಲಿಂಬಾವಳಿ(ಮಹಾದೇವಪುರ ಶಾಸಕ), ಆರ್.ಶಂಕರ((ವಿಧಾನ ಪರಿಷತ್ ಸದಸ್ಯ)) ಹಾಗೂ ಮುರುಗೇಶ ನಿರಾಣಿ(ಬೀಳಗಿ ಶಾಸಕ)
ಸಿಎಂ ಬಿಎಸ್ವೈ ಅಧಿಕೃತವಾಗಿ ಈ ಏಳು ಜನರನ್ನ ಘೋಷಿಸಿದ್ದಾರೆ. 1 ಸ್ಥಾನ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.