ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಇನ್ನೇನು ಕೆಲವೇ ಗಂಟೆಗಳಲ್ಲಿ 7 ಜನರು ನೂತನವಾಗಿ ಸಚಿವರಾಗಲಿದ್ದಾರೆ. ಸಚಿವ ಸ್ಥಾನ ಸಿಕ್ಕವರು ಖುಷಿಯಾಗಿದ್ರೆ ಸಿಗದೆ ಇರುವವರು ಫುಲ್ ಗರಂ ಆಗಿದ್ದಾರೆ. ನಾನು ಸೋತಿದ್ದರೆ ಸಚಿವ ಸ್ಥಾನ ಸಿಗತ್ತಿತ್ತೇನೋ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ, ಮಾತು ಕೊಟ್ಟು ಮೋಸ ಮಾಡಿದ್ದೀರಿ ಎಂದು ಗರಂ ಆಗಿ ಅಸಮಾಧಾನ ಹೊರ ಹಾಕಿದ್ದಾರೆ. 17 ಜನರ ರಾಜೀನಾಮೆಯಿಂದ ಸರ್ಕಾರ ಬಂದಿದೆ. ಅವನೇನು ಬ್ಲ್ಯಾಕ್ ಮೇಲೆ ಮಾಡ್ತಿದ್ದನಾ ಎಂದು ಸಿ.ಪಿ ಯೋಗೇಶ್ವರ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.
ಹೀಗೆ ಸಚಿವ ಸ್ಥಾನ ಸಿಗದ ನಾಯಕರು ಸಿಎಂ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಲೇ ಇದ್ದಾರೆ. ಇದ್ರಿಂದಾಗಿ ಬಿಜೆಪಿಯಲ್ಲಿ ಮತ್ತೆ ಒಂದಿಷ್ಟು ಮುಸುಕಿನ ಗುದ್ದಾಟ ಶುರುವಾಗಿದೆ.