ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನೂತನವಾಗಿ 29 ಸಚಿವರೇನೋ ಆದರು. ಅವರಿಗೆ ಯಾವ ಖಾತೆ ಅನ್ನೋ ಕುತೂಹಲವಿತ್ತು. ಅದರಲ್ಲಿ ಕೆಲವರ ಖಾತೆಯ ಮಾಹಿತಿ ಸಿಕ್ಕಿದೆ. ಕೆ.ಎಸ್ ಈಶ್ವರಪ್ಪಗೆ ಗೃಹ ಖಾತೆ, ಆರ್.ಅಶೋಕಗೆ ಬೆಂಗಳುರು ನಗರಾಭಿವೃದ್ಧಿ, ಅಶ್ವಥನಾರಾಯಣಗೆ ಐಟಿಬಿಟಿ, ಗೋವಿಂದ ಕಾರಜೋಳಗೆ ಜಲಸಂಪನ್ಮೂಲ, ಉಮೇಶ ಕತ್ತಿಗೆ ಪಿಡಬ್ಲುಡಿ, ಬಿಸಿ ನಾಗೇಶಗೆ ಶಿಕ್ಷಣ, ಸುನೀಲ ಕುಮಾರಗೆ ಹಿಂದುಳಿದ ವರ್ಗ, ಮಾಧುಸ್ವಾಮಿಗೆ ಕಾನೂನು ಮತ್ತು ಸಂಸದೀಯ, ಅರಗಜ್ಞಾನೇಂದ್ರ ಅರಣ್ಯ, ಡಾ.ಕೆ ಸುಧಾಕರಗೆ ಆರೋಗ್ಯ ಖಾತೆ, ಬಿ.ಸಿ ಪಾಟೀಲ ಕೃಷಿ, ಸೋಮಣ್ಣಗೆ ಕಂದಾಯ, ಎಸ್.ಟಿ ಸೋಮಶೇಖರಗೆ ಸಹಕಾರ ಮತ್ತು ವಸತಿ ನೀಡಲಾಗಿದೆ ಎನ್ನಲಾಗ್ತಿದೆ.