ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ, ವಿಪಕ್ಷ ನಾಯಕರಾಗಿ ಆರ್.ಅಶೋಕ್ ನೇಮಕವಾದ ಮೇಲೆ ಆಂತರಿಕ ಕಚ್ಚಾಟಗಳು ಇದೀಗ ಬೀದಿಗೆ ಬರುತ್ತಿವೆ. ಶಾಸಕ ಯತ್ನಾಳ ಬಳಿಕ ಇತರೆ ನಾಯಕರು ತಮ್ಮ ಅಸಹಮತ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಶಾಸಕ ಅರವಿಂದ್ ಲಿಂಬಾವಳಿ, ವಿರೋಧ ಪಕ್ಷಗಳೊಂದಿಗೆ ವಿಜಯೇಂದ್ರ, ಆರ್.ಅಶೋಕ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ನಾವು ಅಳೆದು ತೂಗಿ ವಿಜಯೇಂದ್ರರನ್ನು ಆಯ್ಕೆ ಮಾಡಿಲ್ಲ. ನಮ್ಮಲ್ಲಿನ 66 ಶಾಸಕರಲ್ಲಿ ಅನೇಕರು ಸ್ವಂತ ಬಲದಿಂದ ಗೆದ್ದು ಬಂದಿದ್ದಾರೆ. ಕೆಲವರು ಹೊಂದಾಣಿಕೆ ಮಾಡಿಕೊಂಡು ಗೆದ್ದಿದ್ದಾರೆ. ಯಾಕಂದರೆ ಇದು ಹೊಂದಾಣಿಕೆ ಕಾಲ. ಹೊಂದಾಣಿಕೆಯಿಂದಲೇ ಅವರ ಹೆಚ್ಚಿನ ಸ್ಥಾನ ಗೆಲ್ಲಿಸಹುದು. ಹೀಗಾಗಿ ಅವರನ್ನು ನೇಮಕ ಮಾಡಲಾಗಿದೆ ಅಂತಾ ಅಸಮಾಧನ ವ್ಯಕ್ತಪಡಿಸಿದ್ದಾರೆ.