ಡಾ.ಪುನೀತ್ ರಾಜಕುಮಾರಗೆ ‘ಕರ್ನಾಟಕ ರತ್ನ’ ಪ್ರಶಸ್ತಿ

173

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನಸಭಾ ಮುಂಭಾಗದಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪವರ್ ಸ್ಟಾರ್ ದಿವಂಗತ ಡಾ.ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್, ಅಪ್ಪು ದೇವರ ಮಗು. ಆ ಮಗು ನಮ್ಮ ಜೊತೆಗೆ ಕೆಲ ಕಾಲ ಇದ್ದು ನಮ್ಮನ್ನೆಲ್ಲ ರಂಜಿಸಿ ಮತ್ತೆ ದೇವರ ಬಳಿ ಹೋಗಿದ್ದಾನೆ ಎಂದರು. ನಂತರ ಮಾತನಾಡಿದ ಜೂನಿಯರ್ ಎನ್ ಟಿಆರ್, ವ್ಯಕ್ತಿತ್ವ ಅನ್ನೋದು ಸ್ವಂತ ಸಂಪಾದನೆ. ಬರೀ ನಗು, ಪ್ರೀತಿಯಿಂದ ಯುದ್ಧ ಮಾಡದೆ ಒಂದು ರಾಜ್ಯವನ್ನು ಗೆದ್ದವರು ಯಾರಾದರೂ ಇದ್ದರೆ ಅದು ಪುನೀತ್ ರಾಜಕುಮಾರ್ ಅವರು ಒಬ್ಬರೆ ಎಂದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಸಹೋದರ ಶಿವಣ್ಣ, ರಾಘಣ್ಣ, ಇನ್ಫೋಸಸ್ ಮುಖ್ಯಸ್ಥೆ ಸುಧಾಮೂರ್ತಿ, ಸಚಿವರಾದ ಡಾ.ಕೆ ಸುಧಾಕರ್, ಆರ್.ಅಶೋಕ್, ಮುನಿರತ್ನ, ಪಿ.ಸುನೀಲ್, ಬಿ.ಸಿ ನಾಗೇಶ್ ಸೇರಿದಂತೆ ಹಲವು ಗಣ್ಯರಿದ್ದರು. ಅಪಾರಸಂಖ್ಯೆಯ ಅಭಿಮಾನಿಗಳು ಸೇರಿದಂತೆ ಎಲ್ಲರು ಮಳೆಯಲ್ಲಿ ನೆನೆದುಕೊಂಡು ಸಮಾರಂಭವನ್ನು ವೀಕ್ಷಿಸಿದರು.




Leave a Reply

Your email address will not be published. Required fields are marked *

error: Content is protected !!