ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಳೆದ ಜೂನ್ 19ರಂದು ಕರ್ನಾಟಕ ರಾಜ್ಯ ಸರ್ಕಾರ ಕೆಲ ಕೆಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಅದನ್ನ ಇದೀಗ ರದ್ದು ಮಾಡಲಾಗಿದೆ. ಈ ಮೂಲಕ ವರ್ಗಾವಣೆಯಾದ ಅಧಿಕಾರಿಗಳು ಈ ಮೊದಲಿಂದ ಸ್ಥಾನದಲ್ಲಿಯೇ ಮುಂದುವರೆಯಲಿದ್ದಾರೆ.
ಬಿಡಿಎ ಕಾರ್ಯದರ್ಶಿಯಾಗಿ ವಾಸಂತಿ ಅಮರ ವಾಪಸ್, ಕೆ.ಎಸ್ ರಂಗಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾಪಸ್, ಪಶುಸಂಗೋಪನೆ ಇಲಾಖೆ ಜೆಡಿ ಶೀಲವಂತ ಶಿವಕುಮಾರ ಹಾಗೂ ಮೂಡಾ ಆಯುಕ್ತರಾಗಿ ನಟೇಶ ಅವರನ್ನ ಮುಂದುವರೆಸಲಾಗಿದೆ.