ಗೂಗಲ್ ನಿಂದ ವರನಟನಿಗೆ ಅವಮಾನ: ಹೆಚ್ಡಿಕೆ ಆಕ್ರೋಶ

266

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಕನ್ನಡಿಗರ ವಿಚಾರದಲ್ಲಿ ಗೂಗಲ್ ಪದೆ ಪದೆ ತಪ್ಪುಗಳನ್ನ ಮಾಡುತ್ತಿದೆ. ಈ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತಿದೆ. ಭಾಷೆಯ ಬಳಿಕ ಇದೀಗ ವರನಟ ಡಾ.ರಾಜಕುಮಾರ ವಿಚಾರದಲ್ಲಿ ಗೂಗಲ್ ಅವಮಾನ ಮಾಡಿದೆ.

ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಗೂಗಲ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಈ ಎಲ್ಲ ಪ್ರಕರಣಗಳ ಹಿಂದೆ ಯಾರೋ ಕನ್ನಡ ವಿರೋಧಿ ಪಟ್ಟಭದ್ರರು ಇದ್ದಂತೆ ಕಾಣುತ್ತದೆ. ಇದರ ಬಗ್ಗೆ ಗಂಭೀರ ತನಿಖೆಯಾಗಬೇಕು. ಕಾಣದ ಕೈಗಳನ್ನ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!