ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಪೋಷಕರು, ಸ್ವಿಇಚ್ಛಾ ಹೇಳಿಕೆ ರದ್ದು ಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಅದನ್ನ ಮಂಗಳವಾರ ಹೈಕೋರ್ಟ್ ವಜಾಗೊಳಿಸಿದೆ.
ವಿಚಾರಣೆ ಸಂದರ್ಭದಲ್ಲಿ ಯುವತಿಯ ಮನಸ್ಥಿತಿ ಸರಿಯಿರ್ಲಿಲ್ಲ. ಹೀಗಾಗಿ 164ರ ಅಡಿಯಲ್ಲಿ ನೀಡಿರುವ ಹೇಳಿಕೆಯನ್ನ ರದ್ದು ಪಡಿಸಬೇಕೆಂದು ಪೋಷಕರ ಪರ ವಕೀಲ, ಸಂಕೇತ ಏಣಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಸಿಆರ್ ಪಿ ಕಲಂ 164 ಅಡಿಯಲ್ಲಿ ನೀಡಿದ ಹೇಳಿಕೆ ನ್ಯಾಯಬದ್ಧವಾಗಿದೆ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ.