‘ಕಾವೇರಿ’ ಕಾಳಗದಲ್ಲಿ ಯಾರಿಗೆ ಒಲಿಯುತ್ತಾಳೆ?

461

ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ನಡುವೆ ಇದೀಗ ಕಾವೇರಿಗಾಗಿ ಬಿಗ್ ಫೈಟ್ ನಡೆಯುತ್ತಿದೆ. ಕಾವೇರಿಯನ್ನ ತಮ್ಗೆ ಬಿಟ್ಟು ಕೊಡಬೇಕೆಂದು ಮಾಜಿ ಸಿಎಂ ಹೇಳ್ತಿದ್ದು, ಹಾಲಿ ಸಿಎಂ ನೋ ವೇ ಅಂತಿದ್ದಾರೆ.

ನಗರದ ವಿಂಡ್ಸ್ ರ್ಮ್ಯಾನರ್ ಹತ್ತಿರದಲ್ಲಿ ಕಾವೇರಿ ನಿವಾಸವಿದೆ. ಈ ಹಿಂದೆ ಇದನ್ನ ಮಾಜಿ ಸಿಎಂ ಸಿದ್ದರಾಮಯ್ಯ ಬಳಸ್ತಿದ್ರು. ಇದನ್ನ 20 ದಿನದೊಳಗೆ ಖಾಲಿ ಮಾಡಿ ಎಂದು ಡಿಪಿಎಆರ್ ಸೂಚಿಸಿದೆ. ಆದ್ರೆ, ಪ್ರತಿಪಕ್ಷ ನಾಯಕನಾಗಿ ಮಾಜಿ ಸಿಎಂ ಆಯ್ಕೆ ಆಗಿರುವುದ್ರಿಂದ ಇದು ತಮ್ಗೆ ಇರ್ಲಿ ಅಂತಿದ್ದಾರೆ. ಇದು ಈಗಾಗ್ಲೇ ಸಿಎಂಗೆ ನಿಗದಿ ಮಾಡಲಾಗಿದೆ. ಸಾರ್ವಜನಿಕರ ಸಮಸ್ಯೆ ಆಲಿಸಲು ಇದು ಅವರಿಗೆ ನೀಡಲಾಗಿದೆ. 20 ದಿನದೊಳಗೆ ಖಾಲಿ ಮಾಡಿ ಅಂತಿದೆ ಸರ್ಕಾರ.

ಕಾವೇರಿ ನಿವಾಸ

ಕಾವೇರಿ ನಿವಾಸಿ ಹಾಲಿ ಹಾಗೂ ಮಾಜಿ ಸಿಎಂಗೆ ಅದೃಷ್ಟದ ಮನೆ ಎನ್ನಲಾಗ್ತಿದೆ. ಹೀಗಾಗಿ ಇದರಲ್ಲಿ ವಾಸ್ತವ್ಯಕ್ಕಾಗಿ ತಮ್ಗೆ ಬೇಕು ಅಂತಿದ್ದಾರೆ. ಅಸಲಿಗೆ ಈ ಮೊದ್ಲು ಕೆ.ಜೆ ಜಾರ್ಜ್ ಬೃಹತ್ ಕೈಗಾರಿಕೆ ಸಚಿವರಾಗಿದ್ದಾಗ ಅವರಿಗೆ ನಿಗದಿ ಮಾಡಲಾಗಿತ್ತು. ಅವರು ಬರದೆಯಿರುವ ಕಾರಣ ಸಿದ್ದರಾಮಯ್ಯ ಬಳಕೆ ಮಾಡ್ತಿದ್ರು. ಇದೀಗ ಖಾಲಿ ಮಾಡಲು ಸೂಚಿಸಲಾಗಿದೆ. ಅಂತಿಮವಾಗಿ ಕಾವೇರಿ ಯಾರಿಗೆ ಒಲಿಯುತ್ತಾಳೆ ಗೊತ್ತಿಲ್ಲ.




Leave a Reply

Your email address will not be published. Required fields are marked *

error: Content is protected !!