ಚೆನ್ನೈ: ತಮಿಳುನಾಡಿನ ಮಾಮಲಪುರಂನಲ್ಲಿ ಚೀನಾ ಅಧ್ಯಕ್ಷರ ಜೊತೆ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ರು. ಅದಕ್ಕೂ ಮೊದ್ಲು ಬೆಳಗ್ಗೆ ಸುಮಾರು ಅರ್ಧ ಗಂಟೆಕಾಲ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯ ಮಾಡಿದ್ರು.
ಮಾಮಲಪುರಂ ಬೀಚ್ ನಲ್ಲಿ ಅರ್ಧಗಂಟೆ ಸುತ್ತಾಡಿ ಕಸವನ್ನ ತೆಗೆದೆ. ನನ್ನಲ್ಲಿ ಸಂಗ್ರಹವಾದ ಕಸವನ್ನ ಹೋಟೆಲ್ ಜಯರಾಜಗೆ ನೀಡಿದೆ ಅಂತಾ ಪ್ರಧಾನಿ ಮೋದಿ ಟ್ವೀಟ್ ನಲ್ಲಿ ಬರೆದಿದ್ದಾರೆ. ನಮ್ಮ ಸಾರ್ವಜನಿಕ ಸ್ಥಳಗಳನ್ನ ಸ್ವಚ್ಛತೆಯಿಂದ ನೋಡಿಕೊಳ್ಳೋಣ ಅಂತಾ ಹೇಳಿದ್ದಾರೆ.
ಬೆಳಗ್ಗೆ ಜಾಗಿಂಗ್ ಮಾಡುವುದರ ಜೊತೆಗೆ ಕಸವನ್ನ ತೆಗೆದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು. ಆರೋಗ್ಯ ಹಾಗೂ ಸ್ವಚ್ಛತೆಗೆ ಸಹಕಾರಿ ಅಂತಾ ಪಿಎಂ ಹೇಳಿದ್ದಾರೆ.