ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕೆಲ ತಾಂತ್ರಿಕ ಕಾರಣದಿಂದ ನಟ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ರಿಲೀಸ್ ಆಗಿಲ್ಲ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಥಿಯೇಟರ್ ವೊಂದರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
ಟಿಪ್ಪು ಚೌಕ್ ಹತ್ತಿರದಲ್ಲಿರುವ ಡ್ರೀಮ್ ಲ್ಯಾಂಡ್ ಥಿಯೇಟರ್ ಮೇಲೆ ಅಭಿಮಾನಿಗಳು ಕಲ್ಲು ತೂರಾಟ ನಡೆಸಿ ಗಲಾಟೆ ಮಾಡಿದ್ದಾರೆ. ಇದರಿಂದಾಗಿ ಗಾಜುಗಳು ಪುಡಿಪಡಿಯಾಗಿ ಚಿತ್ರಮಂದಿರಕ್ಕೆ ಹಾನಿಯಾಗಿದೆ. ಇನ್ನು ಬೆಳಗಾವಿಯಲ್ಲೂ ಇದೆ ರೀತಿ ಮಾಡಲು ಮುಂದಾದ ಅಭಿಮಾನಿಗಳನ್ನು ಪೊಲೀಸರು ತಡೆದಿದ್ದಾರೆ.