ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ಶಿವಣ್ಣ ಕೊಟಾರಗಸ್ತಿ ಅವರನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷರ ನಿರ್ದೇಶನದ ಮೇರೆಗೆ ಆದೇಶ ಹೊರಡಿಸಲಾಗಿದೆ.
ನೂತನ ಜವಾಬ್ದಾರಿ ವಹಿಸಿಕೊಂಡ ಶಿವಣ್ಣ ಕೊಟಾರಗಸ್ತಿ ಅವರಿಗೆ ಕಾಂಗ್ರೆಸ್ ನ ತಾಲೂಕಿನ ವಿವಿಧ ಮುಖಂಡರು, ಜಿಲ್ಲಾ ಮುಖಂಡರು ಗೌರವಿಸಿ ಶುಭ ಕೋರಿದ್ದಾರೆ.