ಯಡಿಯೂರಪ್ಪ ದಿಢೀರ್ ಮಾಧ್ಯಮಗೋಷ್ಠಿ

137

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಇನ್ನು ರಾಜಕೀಯ ಲೆಕ್ಕಾಚಾರಗಳು ಜೋರಾಗಲಿವೆ. ಇದೀಗ ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ದಿಢೀರ್ ಎಂದು ಮಾಧ್ಯಮಗೋಷ್ಠಿ ಕರೆದಿದ್ದಾರೆ. ಇಂದು ಮುಂಜಾನೆ 11 ಗಂಟೆಗೆ ಮಾಧ್ಯಮಗೋಷ್ಠಿಯನ್ನು ನಡೆಸಲಿದ್ದಾರೆ.

ಈ ವೇಳೆ ಏನೆಲ್ಲ ಹೇಳಬಹುದು ಅನ್ನೋ ಕುತೂಹಲ ಮೂಡಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿ ಹೋಗಿದ್ದಾರೆ. ಪುತ್ರ ವಿಜಯೇಂದ್ರ ಈ ಬಾರಿ ಸ್ಪರ್ಧಿಸಲು ಸಿದ್ಧರಾಗಿದ್ದು, ತಂದೆಯ ಕ್ಷೇತ್ರವಾಗಿರುವ ಶಿಕಾರಿಪುರದಿಂದಲಾ ಅಥವ ಬೇರೆ ಕ್ಷೇತ್ರದಿಂದಲಾ ಎನ್ನುವ ಪ್ರಶ್ನೆಯಿದೆ. ಹೀಗಾಗಿ ಯಾವುದರ ಬಗ್ಗೆ ಹೇಳಬಹುದು ಎಂಬ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!