ಸಿಎಂ ಡಿಸ್ಚಾರ್ಜ್ ಹಿಂದೆ ಮೇ 10ರ ಸೀಕ್ರೆಟ್?

274

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಎರಡನೇ ಬಾರಿಗೆ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಇಂದು ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದಲೇ ಆಡಳಿತ ನಡೆಸ್ತಿದ್ದ ಸಿಎಂ ತರಾತುರಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದರ ಹಿಂದೆ ಮೇ 10ರ ಸೀಕ್ರೆಟ್ ಇದೆ ಎಂದು ಹೇಳಲಾಗ್ತಿದೆ.

ಹೀಗೆ ಡಿಸ್ಚಾರ್ಜ್ ಮುಖ್ಯಮಂತ್ರಿ ತುರ್ತು ಕ್ಯಾಬಿನೆಟ್ ಮೀಟಿಂಗ್ ಗೆ ಮುಂದಾಗಿದ್ದಾರೆ. ಇದಕ್ಕೆಲ್ಲ ಕಾರಣ, ಮೇ 10ರ ನಂತರ ನಾಯಕತ್ವ ಬದಲಾವಣೆಯಾಗುತ್ತೆ ಅನ್ನೋದು ಎನ್ನಲಾಗ್ತಿದೆ. ಸಿಎಂ ಇರುವಾಗ ರಾಜ್ಯಪಾಲರು ಸರ್ವಪಕ್ಷ ಸಭೆ ನಡೆಸಿದಾಗ್ಲೇ ಸಾಕಷ್ಟು ಅನುಮಾನ ಮೂಡಿತ್ತು. ಅದಕ್ಕೆ ಇದು ಪುಷ್ಟಿ ನೀಡ್ತಿದೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಯಕತ್ವ ಬದಲಾವಣೆ ಬಗ್ಗೆ ಪದೆಪದೆ ಹೇಳಿಕೊಂಡು ಬರ್ತಿದ್ದಾರೆ. ಬಹುಶಃ ಅವರ ಮಾತು ನಿಜವಾಗುತ್ತಾ ಅನ್ನೋ ಪ್ರಶ್ನೆ ಮೂಡಿದ್ದು, ಶೀಘ್ರದಲ್ಲೇ ಇದಕ್ಕೆ ಉತ್ತರ ಸಿಗಬಹುದು.




Leave a Reply

Your email address will not be published. Required fields are marked *

error: Content is protected !!