ವಿಜಯಪುರ: ನಳೀನಕುಮಾರ ಕಟೀಲ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಬಸವನಗೌಡ ಪಾಟೀಲ ಯತ್ನಾಳ ಮಾತು ಕೇಳಬೇಕಾಗಿಲ್ಲ. ಅವರನ್ನ ಕೇಳಿ ರಾಜ್ಯಾಧ್ಯಕ್ಷರ ನೇಮಿಸುವ ಅಗತ್ಯವಿಲ್ಲವೆಂದು ತುಂಬಾ ಖಾರವಾಗಿ ಉತ್ತರಿಸಿದ್ದಾರೆ. ಯತ್ನಾಳರ ಹೇಳಿಕೆಗಳಂತೆ ರಾಜ್ಯಾಧ್ಯಕ್ಷರ ಹುದ್ದೆ ಕೊಡಲು ಆಗೋದಿಲ್ಲವೆಂದು ಕಿಡಿ ಕಾರಿದ್ದಾರೆ.
ನೂತನ ರಾಜ್ಯಾಧ್ಯಕ್ಷರು ರಾಜ್ಯದಲ್ಲಿ ಹೆಚ್ಚು ಪ್ರವಾಸ ಮಾಡಿಲ್ಲ ಅನ್ನೋ ಆರೋಪವಿದೆ ಅನ್ನೋ ಪ್ರಶ್ನಿಗೆ ಉತ್ತರಿಸಿದ ಅವರು, ಅಮಿತ ಶಾ ಅವರು ಈ ಹಿಂದೆ ಹೆಚ್ಚು ಜನರಿಗೆ ಪರಿಚಯ ಇರ್ಲಿಲ್ಲ. ನಳೀನಕುಮಾರ ಕಟೀಲ ಕೂಡಾ ಒಳ್ಳೆಯ ಕೆಲಸದ ಮೂಲಕ ಪರಿಚಯವಾಗ್ತಾರೆ ಅಂತಾ ಹೇಳಿದ್ರು.