ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ, ಲಾಕ್ ಡೌನ್ ನಿಂದಾಗಿ ಮಾಸಿಕ ಬಸ್ ಪಾಸ್ ಹೊಂದಿದವರು ಸಾಕಷ್ಟು ಸಮಸ್ಯೆ ಎದುರಿಸ್ತಿದ್ದಾರೆ. ಸಾರಿಗೆ ಸೇವೆ ಇಲ್ಲದೆ ಹೋಗಿದ್ರಿಂದ ಬಸ್ ಪಾಸ್ ಪಡೆದು ಹಣ ಕಳೆದುಕೊಂಡೆವಲ್ಲ ಅನ್ನೋ ಚಿಂತೆಯಲ್ಲಿದ್ದರು. ಅವರಿಗೆ ಇದೀಗ ಒಂದು ಶುಭ ಸುದ್ದಿ ಇದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೋಮವಾರ ಪ್ರಕಟಣೆ ಹೊರಡಿಸಿದ್ದು, ಏಪ್ರಿಲ್ 7ರಿಂದ ಸಾರಿಗೆ ನೌಕರರ ಮುಷ್ಕರ ಹಾಗೂ ಏಪ್ರಿಲ್ 28ರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಇದ್ರಿಂದಾಗಿ ಜನರಿಗೆ ಅನಾನೂಕಲವಾಗಿದ್ದು, ಇದೀಗ ಬಸ್ ಪಾಸ್ ಗಳ ಮಾನ್ಯತಾ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಾಸಿಕ ಬಸ್ ಪಾಸ್ ಚಾಲ್ತಿಯಲ್ಲಿರುವವರಿಗೆ 18 ದಿನಗಳವರೆಗೆ ವಿಸ್ತರಣೆ ಮಾಡಿದ್ದು, ಜುಲೈ 8ರ ತನಕ ಅವಧಿ ವಿಸ್ತರಿಸಿಕೊಡಲಾಗಿದೆ. ಏಪ್ರಿಲ್ 8ರಿಂದ 27ರ ಅವಧಿಯಲ್ಲಿ ಪಡೆದ ಪಾಸ್ ಗಳಿಗೆ ಸಂಬಂಧಿಸಿದಂತೆ, ದಿನಾಂಕಕ್ಕೆ ಅನುಗುಣವಾಗಿ ವಿಸ್ತರಣೆ ಮಾಡಿಕೊಡಲು ತಿಳಿಸಲಾಗಿದೆ. ಪಾಸ್ ಹೊಂದಿರುವವರು ಪಾಸ್ ನೀಡುವ ಕೌಂಟರ್ ನಲ್ಲಿ ವಿಸ್ತರಣೆಯಾಗಿರುವ ಕುರಿತು ದಿನಾಂಕ, ಸಹಿ ಹಾಗೂ ಮುದ್ರೆಯನ್ನ ಹಾಕಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.