ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆ ನೌಕರರು ಮುಷ್ಕರವನ್ನ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ. ಹೀಗಾಗಿ 15 ದಿನಗಳ ಮುಷ್ಕರ ಬಧುವಾರ ಸಂಜೆ ಅಂತ್ಯವಾಗಿದೆ. ಮುಷ್ಕರದಿಂದ ಬಸ್ ಪಾಸ್ ಪಡೆದವರು ಮುಂದೇನು ಅಂತಿದ್ರು. ಅದಕ್ಕೆ ಸಾರಿಗೆ ಇಲಾಖೆ ಅವಕಾಶ ನೀಡಿದೆ.
ಬಿಎಂಟಿಸಿ, ಕೆಎಸ್ಆರ್ ಟಿಸಿ ಸೇರಿದಂತೆ ಎಲ್ಲ ವಿಭಾಗೀಯ ಬಸ್ ಪಾಸ್ ಅವಧಿಯನ್ನ ಮೇ 16ರ ತನಕ ವಿಸ್ತರಣೆ ಮಾಡಲಾಗಿದೆ. ಎಲ್ಲ ಮಾದರಿಯ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಲಾಗಿದೆ.