ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಇದ್ರಿಂದಾಗಿ ಜನರ ಪರದಾಟ ಸಹ ಮುಂದುವರೆದಿದೆ. ಇದಕ್ಕೆಲ್ಲ ಸರ್ಕಾರ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ನೀವು ಎಷ್ಟೇ ದಿನ ಮುಷ್ಕರ ಮಾಡಿದ್ರೂ ನಾವು 6ನೇ ವೇತನ ಆಯೋಗ ಜಾರಿಗೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳ್ತಿದ್ದಾರೆ. ಈ ಹಗ್ಗಜಗ್ಗಾಟದಲ್ಲಿ ಜನರ ಹೈರಾಣಾಗ್ತಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದವರು ಸಹ ಮೌನವಾಗಿರುವುದು ಹಲವು ಅನುಮಾನ ಮೂಡಿಸಿದೆ.
ಸಾರಿಗೆ ನೌಕರರ ಮನವೊಲಿಸುವ ಕೆಲಸ ಮಾಡದ ಸರ್ಕಾರ ತನ್ನ ಪ್ರತಿಷ್ಟೆ ನೋಡಿಕೊಳ್ತಿದೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಮುಷ್ಕರದ ನೇತೃತ್ವ ವಹಿಸಿಕೊಂಡಿದ್ದೆ ಇಷ್ಟಕ್ಕಲ್ಲ ಕಾರಣವೇ ಅನ್ನೋ ಪ್ರಶ್ನೆ ಮೂಡಿದ್ದು, ಸರ್ಕಾರ ಏನು ಮಾಡುತ್ತೆ ನೋಡಬೇಕು.