ಪ್ರಜಾಸ್ತ್ರ ಸುದ್ದಿ
ವಿಜಯಪುರ: ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
ಈಗಾಗ್ಲೇ ರಾಜ್ಯಾದ್ಯಂತ ಸಂಚಾರ ಬಂದ್ ಶುರು ಮಾಡಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರದಿಂದ ಸರ್ಕಾರ ಮಾಡಿದ ಪ್ಲಾನ್ ಫೇಲ್ ಆಗಿದ್ದು, ಸಾರಿಗೆ ನೌಕರರು ಮುಷ್ಕರ ಶುರು ಮಾಡಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಬಿಸಿ ಗುಮ್ಮಟನಗರಿ ವಿಜಯಪುರಕ್ಕೂ ತಟ್ಟಿದೆ. ಇದರ ಪರಿಣಾಮ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಗಳಿಲ್ಲದೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಪಕ್ಕದ ಮಹಾರಾಷ್ಟ್ರ ಹಾಗೂ ಗೋವಾಗಳಿಂದ ರಾತ್ರಿಯೇ ಬಂದಿಳಿದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಜನರು ಊರುಗಳಿಗೆ ಹೋಗಲು ಬಸ್ ಇಲ್ಲದೆ ಪರದಾಡ್ತಿದ್ದಾರೆ.
ಇನ್ನು ಶ್ರೀಶೈಲಗೆ ತೆರಳಿದ ಯಾತ್ರಿಗಳು ರಾತ್ರಿಯಿಡಿ ಬಸ್ ನಲ್ಲಿ ಬಂದಿದ್ದು, ಈಗ ಜಮಖಂಡಿಗೆ ತೆರಳಲು ಬಸ್ ಇಲ್ಲದೆ 40ಕ್ಕೂ ಹೆಚ್ಚು ಪ್ರಯಾಣಿಕರ ಪರದಾಡುತ್ತಿದ್ದಾರೆ. ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ತೆರಳಿ ವಾಪಸ್ ಬಂದಿರುವ ಭಕ್ತರು ಬಸ್ ನೌಕರರ ಮುಷ್ಕರದಿಂದ ಊರಿಗೆ ಹೋಗಲು ಆಗದೆ ನಿಲ್ದಾಣದಲ್ಲಿಯೇ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ.