ಕುವೆಂಪು ವಿಮಾನ ನಿಲ್ದಾಣ ಕಾರ್ಯಾರಂಭ

184

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪ ರಾಜಕೀಯ ತವರು ಜಿಲ್ಲೆಯಾದ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಅದು ಇದೀಗ ತನ್ನ ಕಾರ್ಯಾ ಶುರು ಮಾಡಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಬಂದು ಇಳಿಯಿತು.

ಇಂಡಿಗೋ ಸಂಸ್ಥೆ ವಿಮಾನದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಎಂ.ಬಿ ಪಾಟೀಲ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ , ಬಿ.ವೈ ವಿಜಯೇಂದ್ರ, ಭಾರತಿ ಶೆಟ್ಟಿ, ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಹಾಲಪ್ಪ ಅವರು ಮೊದಲ ಪ್ರಯಾಣ ನಡೆಸಿದರು. ಈ ಮೂಲಕ ರಾಜ್ಯದ 7ನೇ ವಿಮಾನ ನಿಲ್ದಾಣ ಪ್ರಾರಂಭವಾಗಿದೆ.

ಈ ಭಾಗದ ಜನರ ಕನಸು ಇದೀಗ ನನಸಾಗಿದೆ. ಎಲ್ಲರೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಿಮಾನ ನಿಲ್ದಾಣಕ್ಕೆ ಈ ಹಿಂದೆ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಯಡಿಯೂರಪ್ಪನವರ ಹೆಸರು ಇಡಲು ಪ್ರಸ್ತಾಪಿಸಿದ್ದರು. ಅವರು ಬೇಡವೆಂದು ರಾಷ್ಟ್ರಕವಿ ಕುವೆಂಪು ಅವರ ಹೆಸರು ಸೂಚಿಸಿದರು. ಹೀಗಾಗಿ ಇಂದು ಕುವೆಂಪು ವಿಮಾನ ನಿಲ್ದಾಣವಾಗಿ ತನ್ನ ಕೆಲಸ ಪ್ರಾರಂಭಿಸಿದೆ.




Leave a Reply

Your email address will not be published. Required fields are marked *

error: Content is protected !!