ಸಿಎಂ ಬಿಎಸ್ವೈ ಬೇಕು ಬೇಡದಲ್ಲಿ ಗೆಲ್ಲೋದ್ಯಾರು?

257

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ಭರ್ಜರಿ ಪಾಲಿಟ್ರಿಕ್ಸ್ ನಡೆಯುತ್ತಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಒಂದು ಪಡೆ ವಿರೋಧ ವ್ಯಕ್ತಪಡಿಸ್ತಿದೆ. ಇನ್ನೊಂದು ಪಡೆ ಪರವಾಗಿ ನಿಂತಿದೆ. ಈ ಎಲ್ಲ ಗೊಂದಲಗಳಿಗೆ ತೆರೆಎಳೆಯಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಬೆಂಗಳೂರಿಗೆ ಬುಧವಾರ ಬಂದಿದ್ದಾರೆ.

ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲವೆಂದು ಅನ್ನೋದು ಕೆಲವರು. ಬಿಎಸ್ವೈ ಬೇಡ ಎಂದು ಹೈಕಮಾಂಡ್ ತನಕ ಹೋಗಿ ಬಂದವರು, ಅರುಣ ಸಿಂಗ್ ಎದುರು ಏನು ದೂರು ಹೇಳುತ್ತಾರೆ ಅನ್ನೋದು ಸಧ್ಯ ಮುಖ್ಯವಾಗಿದೆ. ಬುಧವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಎನ್ನಲಾಗ್ತಿದೆ.

ಇನ್ನು ಬಿಎಎಸ್ವೈ ಪರ ಸ್ವಾಮೀಜಿಗಳು ನಿಂತಿದ್ದು, ನಾಯಕತ್ವ ಬದಲಾದ್ರೆ ರಾಜ್ಯದಲ್ಲಿ ಅಲೋಲಕಲ್ಲೋಲ ಆಗುತ್ತೆ ಅನ್ನೋ ಎಚ್ಚರಿಕೆ ನೀಡಿದ್ದಾರೆ. ಇದಕ್ಕಾಗಿ ಸ್ವಾಮೀಜಿಗಳು ದೆಹಲಿಗೆ ಹೋಗೋದಕ್ಕೂ ಸಿದ್ಧವೆಂದು ಹೇಳುವ ಮೂಲಕ ಬೆದರಿಕೆ ಹಾಕುವ ಕೆಲಸ ನಡೆದಿದೆ. ಹೀಗಾಗಿ ಬಿಎಸ್ವೈ ಬೇಕು ಬೇಡ ಅನ್ನೋ ಗುದ್ದಾಟದಲ್ಲಿ ಗೆಲ್ಲೋದ್ಯಾರು ಅನ್ನೋದು ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!