ಕರೋನಾ ಕಿರಿಕಿರಿ: ಐಪಿಎಲ್ ರದ್ದತಿಗೆ ಪತ್ರ

350

ಕ್ರಿಕೆಟ್ ಅಭಿಮಾನಿಗಳು ಹೊಡಿಬಡಿ ಐಪಿಎಲ್ ಟೂರ್ನಿ ನೋಡಲು ಕಾತುರರಾಗಿದ್ದಾರೆ. ತಂತಮ್ಮ ನೆಚ್ಚಿನ ತಂಡಗಳಿಗೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ. ಇದರ ನಡುವೆ ಬಿಗ್ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ಅದೇನು ಅಂದ್ರೆ ಐಪಿಎಲ್ ರದ್ದು ಮಾಡಬೇಕು ಅನ್ನೋದು.

ವಿಶ್ವದೆಲ್ಲೆಡೆ ಕರೋನಾ ಅಟ್ಯಾಕ್ ಮಾಡಿದ್ದು, ಜನರು ಹೈರಾಣಾಗಿದ್ದಾರೆ. ಗುಂಪು ಗುಂಪಾಗಿ ಸೇರುವುದನ್ನ ತಪ್ಪಿಸಬೇಕು ಅಂತಾ ಜನ ಜಾಗೃತಿ ಮೂಡಿಸಲಾಗ್ತಿದೆ. ಹೀಗಾಗಿ ಈ ಬಾರಿ ಐಪಿಎಲ್ ರದ್ದು ಮಾಡಬೇಕೆಂದು ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಇದರ ಬೆನ್ನಲ್ಲೇ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಐಪಿಎಲ್ ಟೂರ್ನಿ ವೇಳೆ ಜನರ ಓಡಾಟ ಹೆಚ್ಚಾಗುತ್ತೆ. ದೇಶ, ವಿದೇಶಗಳಿಂದ ಕ್ರಿಕೆಟ್ ಪ್ರೇಮಿಗಳು ಬರ್ತಾರೆ. ಹೀಗೆ ಗುಂಪು ಗುಂಪಾಗಿ ಸೇರುವುದ್ರಿಂದ ಕರೋನಾ ಹರಡುವ ಭೀತಿಯಿದೆ. ಆದ್ರಿಂದ ಈ ಬಾರಿಯ ಐಪಿಎಲ್ ರದ್ದು ಮಾಡಬೇಕು ಎಂದು ವೈದ್ಯಕೀಯ ಸಚಿವ ಡಾ.ಕೆ ಸುಧಾಕರ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಹೀಗೆ ಕೇಂದ್ರಕ್ಕೆ ಎಲ್ಲರೂ ಪತ್ರ ಬರೆದ್ರೆ ಈ ವರ್ಷ ಚುಟುಕು ವಾರ್ ಬ್ಯಾನ್ ಆದ್ರೂ ಆಗಬಹುದು.


TAG


Leave a Reply

Your email address will not be published. Required fields are marked *

error: Content is protected !!