ದೆಹಲಿ ವಿರುದ್ಧ ಗೆದ್ದು ಬೀಗಿದ ಬೆಂಗಳೂರು ಬಾಯ್ಸ್

165

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಕಳೆದ ಪಂದ್ಯದಲ್ಲಿ ಲಖ್ನೋ ವಿರುದ್ಧ ಗೆಲುವಿನ ಸನೀಹದಲ್ಲಿ ಬಂದು ಸೋತ ಆರ್ ಸಿಬಿ ಇಂದು ದೆಹಲಿ ವಿರುದ್ಧ ಗೆಲುವು ಸಾಧಿಸುವ ಮೂಲಕ 4 ಅಂಕಗಳನ್ನು ಪಡೆಯಿತು. ಈ ಮೂಲಕ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಅನುಭವಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದೆಹಲಿ ನಾಯಕ ಡೆವಿಡ್ ವಾರ್ನರ್ ಲೆಕ್ಕಾಚಾರ ಸರಿಯಾಗಿದ್ದರೂ ಗೆಲುವು ಅವರದಾಗಲಿಲ್ಲ. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ತಂಡ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಕೊಹ್ಲಿ 50, ನಾಯಕ ಡುಪ್ಲಸಿ 22, ಲೊಮರ್ 26, ಮ್ಯಾಕ್ಸ್ ವೆಲ್ 24, ಶಹಬಾಜ್ ಅಹ್ಮದ್ 20 ರನ್ ಗಳಿಂದಾಗಿ 174 ರನ್ ಗಳಿಸಿತು. ದೆಹಲಿ ಪರ ಮಾರ್ಸ್, ಕುಲದೀಪ್ ಯಾದವ್ ತಲಾ 2 ವಿಕೆಟ್, ಅಕ್ಷರ್ ಪಟೇಲ್, ಲಲಿತ್ ಯಾದವ್ ತಲಾ 1 ವಿಕೆಟ್ ಪಡೆದರು.

ಈ ಸ್ಕೋರ್ ಬೆನ್ನುಹತ್ತಿದ ದೆಹಲಿ ಟೀಂಗೆ ಕಾಡಿದ್ದು ವೈಶಾಕ ವಿಜಯ ಕುಮಾರ್. 4 ಓವರ್ ಗಳಲ್ಲಿ 3 ವಿಕೆಟ್ ಪಡೆದರು. ಮನೀಶ್ ಪಾಂಡ್ಯ 50, ಅಕ್ಷರ ಪಟೇಲ್ 21, ಆನ್ ರಿಚ್ 23, ನಾಯಕ ವಾರ್ನರ್ 19 ರನ್ ಗಳು ಹೊರತು ಪಡಿಸಿ ಉಳಿದವರು ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು. ಇದರೊಂದಿಗೆ ಆರ್ ಸಿಬಿ 23 ರನ್ ಗಳ ಅಂತರದಿಂದ ಗೆಲುವು ದಾಖಲಿಸಿತು.

ಆರ್ ಸಿಬಿ ಪರ ಮಹಮ್ಮದ್ ಸಿರಾಜ್ 2, ಪರ್ನಲ್, ಹಸರಂಗ್, ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.


TAG


Leave a Reply

Your email address will not be published. Required fields are marked *

error: Content is protected !!