ದೇಶಕ್ಕೆ ಇನ್ನೂ ‘ಲಾಕ್ ಡೌನ್’ನಿಂದ ಮುಕ್ತಿ ಸಿಗಲ್ಲ

314

ನವದೆಹಲಿ: ಎಂದಿನಂತೆ ಇಂದು ರಾತ್ರಿ 8 ಗಂಟೆಗೆ ಮಾತ್ನಾಡಿದ ಪ್ರಧಾನಿ ಮೋದಿ, 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದ್ರೆ, ಯಾವ ವಲಯಕ್ಕೆ ಎಷ್ಟು ಏನು ಅನ್ನೋದು ಘೋಷಿಸಿಲ್ಲ. ಬಹುಶಃ ನಾಳೆ ಅಥವ ಮುಂದಿನ ದಿನಗಳಲ್ಲಿ ವಿತ್ ಸಚಿವರು ತಿಳಿಸಬಹುದೇನೋ ಗೊತ್ತಿಲ್ಲ.

ಲಾಕ್ ಡೌನ್ 4.0 ವಿಭಿನ್ನವಾಗಿರುತ್ತೆ ಎಂದು ಹೇಳಿದ ಅವರು, ಮೇ 18ರ ಮೊದಲು ಈ ಬಗ್ಗೆ ತಿಳಿಸಲಾಗುತ್ತೆ ಎಂದಿದ್ದಾರೆ. ಅಲ್ದೇ, ಕರೋನಾ ನಮ್ಮ ಬದುಕಿನೊಂದಿಗೆ ದೀರ್ಘವಾಗಿ ಇರಲಿದೆ. ಅದರ ಜೊತೆ ಹೊಂದಿಕೊಳ್ಳಬೇಕಾಗಿದೆ. ಆದ್ರೆ, ಅದರ ಸುತ್ತಲೇ ನಮ್ಮ ಜೀವನ ಸುತ್ತುವಂತೆ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.

ಇನ್ನು ಕರ್ನಾಟಕ್ಕೆ ವಿಶೇಷ ಪ್ಯಾಕೇಜ್ ನೀಡುವಲ್ಲಿ ಕೇಂದ್ರ ಸರ್ಕಾರ ಹಿಂದೇಟು ಹಾಕ್ತಿದೆ. ತಮ್ಮದೆ ಪಕ್ಷದ ಆಡಳಿತವಿರುವ ರಾಜ್ಯ ಅಲ್ದೇ, 25 ಬಿಜೆಪಿ ಸಂಸದರನ್ನ ಗೆಲ್ಲಿಸಿದ ರಾಜ್ಯಕ್ಕೆ ಆರ್ಥಿಕ ನೆರವು ನೀಡುವಲ್ಲಿ ಮೋದಿ ಸರ್ಕಾರ ಮುಂದೆ ಬರುತ್ತಿಲ್ಲ. ಹೀಗಾಗಿ ಈ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನಲ್ಲಿ ಕರ್ನಾಟಕಕ್ಕೆ ಎಷ್ಟು ಸಿಗುತ್ತೋ ಗೊತ್ತಿಲ್ಲ.




Leave a Reply

Your email address will not be published. Required fields are marked *

error: Content is protected !!