ಬೆಂಗಳೂರು: ಪ್ರಧಾನಿ ಮಂತ್ರಿ ಮೋದಿ ಅವರು ಮೇ 3ರ ತನಕ ಲಾಕ್ ಡೌನ್ ಮಾಡಿರುವುದು ಸ್ವಾಗತಿಸುತ್ತೇವೆ. ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಕಠಿಣ ಮಾಡಲಾಗುತ್ತೆ. ಹೀಗಾಗಿ ಮಾರ್ಗಸೂಚಿಗಳನ್ನ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತೆ ಎಂದಿದ್ದಾರೆ.
ಏಪ್ರಿಲ್ 20ರ ತನಕ ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಪರಿಸ್ಥಿತಿಯನ್ನ ಅವಲೋಕಿಸಲಾಗುವುದು. ಹೀಗಾಗಿ ಜನರು ಸ್ವಯಂ ಪ್ರೇರಿತವಾಗಿ ಸಹಕರಿಸಬೇಕು. ಪ್ರಧಾನಿ ಹೇಳಿದ್ದಂತೆ ರಾಜ್ಯದಲ್ಲಿ ಆರೋಗ್ಯ ಸೇವೆಗಳನ್ನ ಹೆಚ್ಚಿಸಲಾಗಿದೆ. ಯಾವುದೇ ರೀತಿಯ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರ ಬಗ್ಗೆ ನಿಗಾ ವಹಿಸಿಬೇಕು ಎಂದಿದ್ದಾರೆ.
ಹೀಗಾಗಿ ಮುಂದಿನ ದಿನಗಳಲ್ಲಿ ಜನರು ಸಾಕಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು. ಸುರಕ್ಷಿತವಾಗಿ ಪಾಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.