ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ ಲಾಕ್ ಡೌನ್ ಒಂದಿಷ್ಟು ಸಡಿಲಿಕೆ ಮಾಡಿದೆ. ಇದ್ರಿಂದ ಖುಷಿಯಾದ ಬೆಂಗಳೂರು ಜನತೆ ಏಕಕಾಲದಲ್ಲಿ ರೋಡಿಗಳಿದು ಬಿಟ್ಟಿದ್ದಾರೆ. ಒಮ್ಮೆಯೇ ಸಿಟಿಯಲ್ಲಿ ಲಕ್ಷಾಂತರ ವಾಹನಗಳು ಕಾಣಿಸಿಕೊಂಡು, ಪೊಲೀಸರಿಗೆ ಹೈರಾಣು ಮಾಡಿದ್ದಾರೆ.
ಕರೋನಾ ಹಾಟ್ ಸ್ಪಾಟ್ ಗಳಲ್ಲಿ ಸಡಿಲಿಕೆ ಮಾಡಿಲ್ಲ. ಬೆಂಗಳೂರು ಸಹ ಡೇಂಜರ್ ಝೋನ್ ನಲ್ಲಿದೆ. ಹೀಗಿರುವಾಗ ಹೀಗೆ ಏರಿಯಾಗಳಲ್ಲಿ ಸಾವಿರಾರು ಗಾಡಿಗಳು ಒಮ್ಮೆಲೆ ರೋಡಿಗೆ ಬಂದಿದ್ದಾರೆ. ವಿದ್ಯಾವಂತರಿಂದ ತುಂಬಿರುವ ನಗರದಲ್ಲಿ ಇಷ್ಟೊಂದು ಬೇಜಾವಾಬ್ದಾರಿಯಿಂದ ನಡೆದುಕೊಂಡಿರುವುದು ನಿಜಕ್ಕೂ ಆತಂಕದ ಸಂಗತಿ.