ಪ್ರಜಾಸ್ತ್ರ ಅಪರಾಧ ಸುದ್ದಿ
ರಾಯಚೂರು: ಪೋಷಕರ ವಿರೋಧದ ನಡುವೆ ಪ್ರೇಮ ವಿವಾಹ ಮಾಡಿಕೊಂಡ ತಪ್ಪಿಗೆ, ಬರೋಬ್ಬರಿ ಐವರ ಜೀವ ಹೋಗಿದೆ. ಸಿಂಧನೂರಿನಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಹುಡ್ಗನ ತಾಯಿ, ತಂದೆ, ಸಹೋದರು, ಸಹೋದರಿ ಜೀವ ಕಳೆದುಕೊಂಡ್ರೆ, ಇಬ್ಬರು ಆಸ್ಪತ್ರೆ ಸೇರಿದ್ದಾರೆ.
ಮೌನೇಶ ತಂದೆ ಈರಪ್ಪ, ತಾಯಿ ಸುಮಿತ್ರಮ್ಮ, ಸಹೋದರರಾದ ನಾಗರಾಜ, ಹನುಮೇಶ, ಸಹೋದರಿ ಶ್ರೀದೇವಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗ್ತಿದೆ. ಮತ್ತಿಬ್ಬರು ಸಹೋದರಿಯರಾದ ರೇವತಿ, ತಾಯಮ್ಮ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಂದೇ ಜಾತಿಯವರಾದ 21 ವರ್ಷದ ಮೌನೇಶ ಹಾಗೂ 18 ವರ್ಷದ ಮಂಜುಳಾ ಅನ್ನೋ ಜೋಡಿ 7 ತಿಂಗಳ ಹಿಂದೆ ಗದಗನಲ್ಲಿ ಮದ್ವೆ ಮಾಡಿಕೊಂಡಿದ್ರು. ಇದಕ್ಕೆ ಯುವತಿಯ ಮನೆಯವರು ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಇಷ್ಟು ದಿನ ದೂರವಿದ್ದ ಜೋಡಿ ಇಂದು ಯುವತಿ ಮನೆಗೆ ಬಂದಿದೆ. ಆಗ ಕುಟುಂಬಸ್ಥರು ಗಲಾಟೆ ಮಾಡಿದಾಗ, ಜೀವ ಭಯದಿಂದ ಪೊಲೀಸರ ಮೊರೆ ಹೋಗಿದ್ದಾರೆ.
ನವ ಜೋಡಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ರಿಂದ ಯುವತಿ ಮನೆಯ ಕಡೆವರು, ಹುಡ್ಗನ ಮನೆಗೆ ಬಂದು ಕಬ್ಬಿಣದ ರಾಡ್, ಕಟ್ಟಿಗೆ ತೆಗೆದುಕೊಂಡು ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದ್ರೆ, ಇಬ್ಬರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಬೀಗುವಿನ ವಾತಾವರಣವಿದ್ದು, ಘಟನೆ ಸಂಬಂಧ ಐವರನ್ನ ವಶಕ್ಕೆ ಪಡೆಯಲಾಗಿದೆ. ಈ ಘಟನೆಯಿಂದ ಬರೀ ರಾಯಚೂರು ಮಾತ್ರವಲ್ಲ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ.