ನ್ಯಾಯಾಂಗ ನಿಂದನೆ ವಿಚಾರ ಕೈಬಿಟ್ಟ ಹೈಕೋರ್ಟ್

300

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚೆನ್ನೈ: ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ತಮಿಳು ನಟ ಸೂರ್ಯ, ಕೋರ್ಟ್ ನಿರ್ಧಾರವನ್ನ ಟೀಕಿಸಿದ್ರು. ಹೀಗಾಗಿ ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಪತ್ರ ಬರೆಯಲಾಗಿತ್ತು. ಆದ್ರೆ, ಇದನ್ನ ಮದ್ರಾಸ್ ಹೈಕೋರ್ಟ್ ಕೈಬಿಟ್ಟಿದೆ.

ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಎಸ್.ಎಂ ಸುಬ್ರಮಣಿಯಂ, ನಟ ಸೂರ್ಯ ವಿರುದ್ಧ ಮುಖ್ಯನ್ಯಾಯಮೂರ್ತಿ ಅವರಿಗೆ ಪತ್ರ ಬರೆದು, ಸುಮೋಟೋ ಕ್ರಿಮಿನಲ್ ಪ್ರಕರಣ ನಡೆಸಲು ಹೇಳಿದ್ರು. ಆದ್ರೆ, ನಟನ ವಿರುದ್ಧದ ಕ್ರಿಮಿನಲ್ ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿದೆ.

ನೀಟ್ ಪರೀಕ್ಷೆ ಭಯದಿಂದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಹೀಗಾಗಿ ನೀಟ್ ಪರೀಕ್ಷೆಯನ್ನ ಸರ್ಕಾರ ಶಾಶ್ವತವಾಗಿ ರದ್ದುಗೊಳಿಸಬೇಕು ಎಂದಿದ್ರು. ಕೋವಿಡ್ 19ನಿಂದಾಗಿ ಕೋರ್ಟ್ ಗಳೇ ವರ್ಚೂವಲ್ ವಿಚಾರಣೆ ನಡೆಸ್ತಿರುವಾಗ, ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಂದ್ರಗಳಿಗೆ ಹೋಗಿ ಎನ್ನುವುದು ಎಷ್ಟು ಸರಿ ಎಂದಿದ್ರು.




Leave a Reply

Your email address will not be published. Required fields are marked *

error: Content is protected !!