ಪುನೀತ್ ನಿಧನದ ಆಘಾತದಿಂದ ಇನ್ನು ಹೊರ ಬಂದಿಲ್ಲ: ನಟ ಸೂರ್ಯ

269

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಹೃದಯಾಘಾತದಿಂದಾಗಿ ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ತಮಿಳು ನಟ ಸೂರ್ಯ ಭೇಟಿ ಕೊಟ್ಟರು. ಅಗಲಿದ ನಟನನ್ನು ನೆನದು ಸೂರ್ಯ ಕಣ್ಣೀರು ಹಾಕಿದರು. ಈ ವೇಳೆ ಶಿವಣ್ಣ ಜೊತೆಯಲ್ಲಿದ್ದರು.

ಡಾ.ರಾಜ್ ಕುಮಾರ್ ಕುಟುಂಬದೊಂದಿಗೆ ನಮ್ಮದು ಅವಿನಾಭಾವ ಸಂಬಂಧವಿದೆ. ಪುನೀತ್ ಸದಾ ನಗು ಮುಖದಿಂದ ಸ್ವಾಗತಿಸುತ್ತಿದ್ದರು. ಪುನೀತ್ ನನಗಿಂತ 3 ತಿಂಗಳು ದೊಡ್ಡವರು. ಇಷ್ಟು ಬೇಗ ಅವರು ಅಗಲಿದ್ದು ನಮಗೆ ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ಅಪ್ಪ, ಅಮ್ಮ ಈ ಆಘಾತದಿಂದ ಇನ್ನು ಹೊರ ಬಂದಿಲ್ಲ. ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಿಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!