ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 21ಕ್ಕೆ ಎಲೆಕ್ಷನ್ ನಡೆಯಲಿದೆ. ಹೀಗಿರುವಾಗ ಶಿವಸೇನಾಗೆ ಇದೀಗೆ ದೊಡ್ಡ ಹೊಡೆತ ಬಿದ್ದಿದೆ. ಪ್ರಮುಖ 26 ಜನ ಕಾರ್ಪೂರೇಟರ್ ಗಳು ಹಾಗೂ 300 ಜನ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ.
ಸೀಟು ಹಂಚಿಕೆ ವಿಚಾರದಲ್ಲಿ ಉಂಟಾದ ಭಿನ್ನಮತದಿಂದ ಶಿವಸೇನಾಗೆ ಇದೀಗ ದೊಡ್ಡ ತಲೆನೋವು ಶುರುವಾಗಿದೆ. ಮಹಾರಾಷ್ಟ್ರದ ಕಲ್ಯಾಣ ಪೂರ್ವ ಕ್ಷೇತ್ರದಿಂದ ಧನಂಜಯ ಬಾಡೊರೆಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಆದ್ರೆ, ಅದು ಮೈತ್ರಿ ಪಕ್ಷ ಬಿಜೆಪಿಯ ಪಾಲಾಯ್ತು. ಗಣಪತ್ ಕಲು ಗಾಯಕ್ವಾಡ್ ಬಿಜೆಪಿಯಿಂದ ಸ್ಪರ್ಧೆ ಮಾಡ್ತಿದ್ದಾರೆ. ಇದು ಶಿವಸೇನಾಗೆ ಸಮಸ್ಯೆ ತಂದಿದೆ.
288 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷ ಶಿವಸೇನಾ ನಡುವೆ 150 ಹಾಗೂ 124 ಕ್ಷೇತ್ರಗಳಲ್ಲಿ ಹೊಂದಾಣಿಕೆಯಾಗಿದೆ. ಉಳಿದ 14 ಕಡೆ ಸಣ್ಣಪುಟ್ಟ ಪಕ್ಷಗಳ ಜೊತೆ ಮೈತ್ರಿಯಾಗಿದೆ. ಈ ಹೊಂದಾಣಿಕೆ ವಿಚಾರ ಚುನಾವಣಾ ಹೊಸ್ತಿಲಲ್ಲಿ ದೊಡ್ಡ ಹೊಡೆತ ನೀಡ್ತಿದೆ.