ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ದಿನದಿಂದ ಬೆಲೆ ಏರಿಕೆ ಬರೆ ಜನಸಾಮಾನ್ಯರ ಮೇಲೆ ಆಗುತ್ತಿದೆ. 120ರ ತನಕ ಪೆಟ್ರೋಲ್ ಬೆಲೆಯನ್ನು ತಂದು ಇದೀಗ ಸ್ವಲ್ಪ ಕಡಿಮೆ ಮಾಡಿದ್ದನ್ನೇ ದೊಡ್ಡ ಸಾಧನೆ ಎನ್ನುತ್ತಿರುವ ಹೊತ್ತಿನಲ್ಲಿ, ಪೆಟ್ರೋಲ್ ಮಾಲೀಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಡಿಪೋಗಳಿಂದ ತೈಲ ಖರೀದಿಸದೆ ಇರಲು ನಿರ್ಧರಿಸಿದ್ದಾರೆ. ದಿಢೀರ್ ಎಂದು ಬೆಲೆ ಇಳಿಕೆ ಮಾಡಿದ್ದಕ್ಕೆ ನಷ್ಟವಾಗಿದೆ. ಇದರ ಜೊತೆಗೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತೈಲು ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಹೀಗಾಗಿ ಜನರಿಗೆ ಪೆಟ್ರೋಲ್, ಡೀಸೆಲ್ ಸಿಗದೆ ಹೋಗುವ ಸಾಧ್ಯತೆಯಿದೆ. ಇದು ಪಕ್ಕದ ಶ್ರೀಲಂಕಾ ಪರಿಸ್ಥಿತಿ ನಿರ್ಮಿಸುವ ಸಾಧ್ಯತೆಯಿದೆ.
2011ರಲ್ಲಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಡಬಲ್ ಆಗಿದೆ. ಆದರೆ, ಕಮಿಷನ್ ಏರಿಕೆ ಮಾಡುತ್ತಿಲ್ಲ. ಕೇಂದ್ರ ಪೆಟ್ರೋಲಿಂ ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಲು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಫೆಡರೇಷನ್ ತಿಳಿಸಿದೆ.