ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಗಡಿ ವಿಚಾರದಲ್ಲಿ, ಭಾಷೆ ವಿಚಾರದಲ್ಲಿ ಪದೆಪದೆ ಗಲಾಟೆ ಮಾಡುತ್ತಾ, ಶಾಂತಿ ಕದಡುತ್ತಿರುವ ಎಂಇಎಸ್ ನಿಷೇಧಿಸಬೇಕು ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 15 ದಿನಗಳಲ್ಲಿ ಎಂಇಎಸ್ ನಿಷೇಧಿಸಿ ಕರ್ನಾಟಕ ಏಕೀಕರಣ ಸಮಿತಿ ಸ್ಥಾಪಿಸಬೇಕು ಎಂದರು.
ನಗರದ ಚೆನ್ನಮ್ಮ ಸರ್ಕಲ್ ಬಳಿ ಮಾತ್ನಾಡಿದ ಅವರು, ರಾಜ್ಯ ಸರ್ಕಾರ ಬೆಳಗಾವಿ ಮರೆತಿದೆ. ಗಡಿಯಲ್ಲಿ ನುಗ್ಗಿ ಪುಂಡಾಟ ನಡೆಸಿದ ಶಿವಸೇನೆ ವಿರುದ್ಧ ಎಫ್ಐಆರ್ ದಾಖಲಿಸಿ ಜೈಲಿಗೆ ಹಾಕಬೇಕಿತ್ತು. ಅವರನ್ನ ಹಾಗೆ ಬಿಟ್ಟಿದ್ದು ಸರಿಯಲ್ಲ ಎಂದರು. ಸಿಎಂ ಯಡಿಯೂರಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ರಾಜ್ಯದ ಅತ್ಯಂತ ಅನಿಷ್ಠ ಮುಖ್ಯಮಂತ್ರಿ. ವರ ಆಗುವ ಬದಲು ಶಾಪ ಆಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.