ನವದೆಹಲಿ: ಕಾರ್ಮಿಕರ ಕನಿಷ್ಠ ವೇತನವನ್ನ ದೆಹಲಿ ಸರ್ಕಾರ ಹೆಚ್ಚಿಸಿದೆ. ಈ ಬಗ್ಗೆ ಸಿಎಂ ಅರವಿಂದ ಕೇಜ್ರಿವಾಲ್ ಮಾತ್ನಾಡಿ, ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳದ ಬಗ್ಗೆ ಘೋಷಣೆ ಮಾಡಿದ್ರು. ದೇಶದಲ್ಲಿ ರಾಜ್ಯ ಸರ್ಕಾರ ನೀಡ್ತಿರುವ ಅತ್ಯಧಿಕ ಮೊತ್ತ ಎಂದು ಹೇಳಿದ್ದಾರೆ.
ಈ ತಿಂಗಳಲ್ಲಿ ಶೇಕಡ 37ರಷ್ಟು ವೇತನ ಹೆಚ್ಚಳ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಇದ್ರಿಂದಾಗಿ ಸುಮಾರು 55 ಲಕ್ಷ ಜನ ಕಾರ್ಮಿಕರು ಪ್ರಯೋಜನ ಪಡೆಯಲಿದ್ದಾರೆ. ಏಪ್ರಿಲ್ ನಿಂದ ಸಪ್ಟೆಂಬರ್ ವರೆಗೆ ಒಂದು ತಿಂಗಳ ಸಂಬಳ, ಭತ್ಯೆ ಹಾಗೂ ದೀಪಾವಳಿ ಬೋನಸ್ ನೀಡಲಾಗುವುದು ಅಂತಾ ಸಿಎಂ ಹೇಳಿದ್ದಾರೆ.
ಕನಿಷ್ಠ ವೇತನ ನೀಡದಕ್ಕಾಗಿ 1,373 ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಅಂತಾ ಹೇಳಿದ ಅವರು, ವೇತನ ಹೆಚ್ಚಿಸುವ ಸರ್ಕಾರದ ಅಧಿಸೂಚನೆ ವಿರುದ್ಧ 44 ಉದ್ಯೋಗದಾತ ಸಂಘಗಳು ಅರ್ಜಿ ಸಲ್ಲಿಸಿದ್ದವು. ಇದಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ ನಮ್ಗೆ ಕೋರ್ಟ್ ನಲ್ಲಿ ನಮ್ಮ ಪರ ತೀರ್ಪು ಬಂದಿತು ಎಂದರು. ಅಕ್ಟೋಬರ್ 14ರಂದು ದೆಹಲಿ ಸರ್ಕಾರ ಪರ ತೀರ್ಪು ಬಂದಿದೆ.