ಸಿಂದಗಿ: ಪಟ್ಟಣದಲ್ಲಿ ಇಂದು ಬೆಳಗ್ಗೆ ಸಂಭವಿಸಿದ್ದ ಎರಡು ಬೈಕ್ ಗಳ ನಡುವಿನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿಯನ್ನ ಬದಲಾಯಿಸಲಾಗಿದೆ. ‘ಪ್ರಜಾಸ್ತ್ರ’ದಲ್ಲಿ ಸುದ್ದಿ ಬಂದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ವೈದ್ಯಾಧಿಕಾರಿ ಡಾ. ಮಹೇಂದ್ರ ಕಾಪಸೆ ಮಾಹಿತಿ ಪಡೆದುಕೊಂಡ್ರು.
ಈ ವೇಳೆ ಮಾತ್ನಾಡಿದ ಅವರು, ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿಯನ್ನ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ ಅಂತಾ ಹೇಳಿದ್ರು. ವೈದ್ಯಾಧಿಕಾರಿ ಡಾ.ಸುರೇಖಾ ಹಡಗಲಿ ಅವರ ಜಾಗಕ್ಕೆ ತಾಲೂಕು ವೈದ್ಯಾಧಿಕಾರಿ ಡಾ.ಇಂಗಳೆ ಅವರಿಗೆ ಜವಾಬ್ದಾರಿ ನೀಡಲಾಗಿದೆ ಅಂತಾ ಹೇಳಿದ್ರು.
ಇನ್ನು ಘಟನೆ ಸಂಬಂಧ ತಾಲೂಕು ವೈದ್ಯಾಧಿಕಾರಿಯನ್ನ ವಿಚಾರಾಧಿಕಾರಿಯಾಗಿ ನೇಮಿಸುವ ಮೂಲಕ, ಘಟನೆ ಸಂಬಂಧ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ವರದಿ ಬಂದ ಬಳಿಕ ಜಿಲ್ಲಾಧಿಕಾರಿ, ಕಮಿಷನರ್, ಡಿಪಿಸಿ ಅವರಿಗೆ ಪತ್ರ ಬರೆದು ಮುಂದಿನ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ ಅಂತಾ ಹೇಳಿದ್ರು.
ಘಟನೆ ಹಿನ್ನೆಲೆ:
ಇಂದು ಬೆಳಗ್ಗೆ ಪಟ್ಟಣದ ಸಿಪಿಐ ಕಚೇರಿ ಹತ್ತಿರ ಎರಡು ಬೈಕ್ ಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿತ್ತು. ಬಸಪ್ಪ ಬಿರಾದಾರ ಹಾಗೂ ಕೊರವಾರ ಅನ್ನೋ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದು ಕಂಡು ಬಂದಿದೆ. ಈ ಸಂಬಂಧ ಗಲಾಟೆ ಸಹ ನಡೆದಿತ್ತು. ಈ ಘಟನೆ ಸಂಬಂಧ ಡಿಹೆಚ್ ಒ ಆಸ್ಪತ್ರೆಗೆ ಭೇಟಿ ನೀಡಿ, ಆಡಳಿತಾಧಿಕಾರಿ ಬದಲಾವಣೆ ಮಾಡಿ ಆದೇಶಿಸಿದ್ದಾರೆ.