ಪ್ರಜಾಸ್ತ್ರ ಸುದ್ದಿ
ಬಳ್ಳಾರಿ: ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಗೆ ಅಹಂಕಾರ ಜಾಸ್ತಿ. ಬಿಜೆಪಿ ಶಾಸಕರ ಮಾತುಗಳನ್ನು ಸಹ ಕೇಳಲ್ಲ ಎಂದು ಶಾಸಕ ಸೋಮಶೇಖರ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಅನಾರೋಗ್ಯದ ಹಿನ್ನೆಲೆ ಈ ಬಾರಿ ಸದನಕ್ಕೂ ಬಂದಿಲ್ಲ. ಬಿಜೆಪಿ ಶಾಸಕರ ಮಾತುಗಳನ್ನು ಸಹ ಕೇಳಲ್ಲ. ಅವರ ಕೈಗೂ ಸಿಗುವುದಿಲ್ಲ. ಮೇಲಿಂದ ಇಳಿದು ಬಂದವರಂತೆ ಆಡುತ್ತಾರೆ. ಅಹಂಕಾರ ಜಾಸ್ತಿ ಎಂದು ಕಿಡಿ ಕಾರಿದ್ದಾರೆ.