ಸಂತೋಷ್ ಬುಟ್ಟಿಯಲ್ಲಿ ಇಂತಹ ಚೇಳುಗಳೇ ಇರಬೇಕು: ಎಂಬಿಪಿ

241

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್ ಸಚಿವರ ಜೊತೆಗೆ ಸ್ವಪಕ್ಷೀಯರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಸಚಿವ ಎಂ.ಬಿ ಪಾಟೀಲ್ ಹರಿಹಾಯ್ದರು. ನಮ್ಮ ಸರ್ಕಾರ, ಸಿಎಂ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ನಿಮ್ಮ ವಿರೋಧ ಪಕ್ಷದ ನಾಯಕನನ್ನು ಮೊದಲು ಆಯ್ಕೆ ಮಾಡಲಿ ಅಂತಾ ತಿರುಗೇಟು ನೀಡಿದರು.

ಎಂ.ಬಿ ಪಾಟೀಲ್ ಬಳಿ ಇರುವುದು ಚಿಲ್ಲರೆ ಖಾತೆ ಎಂದಿದ್ದಾರೆ. ಬೃಹತ್ ಕೈಗಾರಿಕೆ ಚಿಲ್ಲರೆ ಖಾತೆಯೇ ಅಂತಾ ಪ್ರಧಾನಿ ಬಳಿ ಕೇಳಿ ಅಂತಾ ಕಿಡಿ ಕಾರಿದರು. 6 ಬಾರಿ ಶಾಸಕ, ಒಮ್ಮೆ ಸಂಸದನಾಗಿ ಕೆಲಸ ಮಾಡಿದ್ದೇನೆ. ಪ್ರತಾಪ್ ಸಿಂಹಗೆ ಚೇಲಾ ಕೆಲಸ ಮಾಡಿ ಅನುಭವ ಇರಬೇಕು. ಇವರು ಚೇಲಾ ಅಂತಾರೆ. ಬಿ.ಎಲ್ ಸಂತೋಷ್ ಚೇಳು ಅಂತಾರೆ. ಇವತ್ತು ಅವರಿಗೆ ಕಡಿಯಿರಿ. ನಾಳೆ ಇವರಿಗೆ ಕಡಿಯಿರಿ ಅಂತಾ ಸಂತೋಷ್ ಚೇಳು ಬಿಡುತ್ತಾರೆ ಅನಿಸುತ್ತದೆ ಅಂತಾ ವಾಗ್ದಾಳಿ ನಡೆಸಿದರು.

ನಾನು ವಿಜಯಪುರದವನು. ನನ್ನ ಹೆಗಲ ಮೇಲೆ ಬಂದೂಕು ಇಟ್ಟು ಯಾರೂ ಹೊಡೆಯಬೇಕಿಲ್ಲ. ಹೊಡೆಯಬೇಕಿದ್ದರೆ ನಾನೇ ಹೊಡೆಯುತ್ತೇನೆ. ಆ ಶಕ್ತಿ ನನಗಿದೆ. ಇಂತಹ ಮಾನಸಿಕ ಸ್ಥಿತಿಯನ್ನು ಪ್ರತಾಪ್ ಸಿಂಹ ಎಲ್ಲಿ ಕಲಿತರೋ ಅಂತಾ ತೀವ್ರ ವಾಗ್ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!