ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಚುನಾವಣೆ ಬಾಂಡ್ ವಿಚಾರದಲ್ಲಿ ಮೋದಿ ಹುಸಿ ವರ್ಚಸ್ಸಿಗೆ ಹೊಡೆತ ಬಿದ್ದಿದೆ. ನಾನು ತಿನ್ನುವುದಿಲ್ಲ. ತಿನ್ನುದಕ್ಕೂ ಬಿಡುವುದಿಲ್ಲ ಎಂದು ಹುಸಿ ವರ್ಚಸ್ ಸೃಷ್ಟಿಸಿಕೊಂಡಿದ್ದರು ಎಂದು ಸಚಿವ ಎಂ.ಬಿ ಪಾಟೀಲ ವಾಗ್ದಾಳಿ ನಡೆಸಿದರು.
ಚುನಾವಣೆ ಬಾಂಡ್ ಮೂಲಕ ಕಾಂಗ್ರೆಸ್ಸಿಗೂ ಒಂದಿಷ್ಟು ಹಣ ಬಂದಿದೆ. ಅದು ಸಹಜ ಪ್ರಕ್ರಿಯೆ. ಆದರೆ, ಇಡಿ, ಸಿಬಿಐ ರೀತಿಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬೆದರಿಕೆ ಹಾಕಿ ವಸೂಲಿ ಮಾಡಿರುವುದಲ್ಲ ಎಂದರು.
ಪ್ರವಾಹ, ಬರ ಬಂದರೆ ಮನಮೋಹನ್ ಸಿಂಗ್ ಅವರು ಖುದ್ಧು ರಾಜ್ಯಗಳಿಗೆ ಭೇಟಿ ಕೊಡುತ್ತಿದ್ದರು. ಆದರೆ, ಪ್ರಧಾನಿ ಮೋದಿಯವರಿಗೆ ಜನರ ಕಾಳಜಿ ಇಲ್ಲ. ಚುನಾವಣೆ ಬಂದಾಗ ಮಾತ್ರ ಕರ್ನಾಟಕಕ್ಕೆ ಬರುತ್ತಾರೆ. ಜನರ ಕಷ್ಟಗಳಿಗೆ ಸ್ಪಂದಿಸುವ ನಿಜವಾದ ಕಾಳಜಿ ಇಲ್ಲ ಅಂತಾ ಕಿಡಿ ಕಾರಿದರು.