ತುಮಕೂರು: ಮೈತ್ರಿ ಸರ್ಕಾರದ ಶಾಸಕರು ಸಾಲು ಸಾಲಾಗಿ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಸಿಎಂ ವಿದೇಶಿ ಪ್ರವಾಸದಲ್ಲಿದ್ದು, ರಾಜ್ಯದಲ್ಲಿ ಆಪರೇಷನ್ ಸುಂಟರಗಾಳಿ ಎದ್ದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್, ಬಿಜೆಪಿ ಅಸ್ತ್ರಕ್ಕೆ ನಾವು ಬ್ರಹ್ಮಾಸ್ತ್ರ ಬಳಸುತ್ತೇವೆ ಅಂತಾ ಹೇಳಿದ್ದಾರೆ.
ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರ ಜಂಟಿ ನಾಯಕತ್ವದಲ್ಲಿ ಸರ್ಕಾರ ಸುಭದ್ರವಾಗಿದೆ. ಇಷ್ಟು ದಿನ ಬಿಜೆಪಿ ಅವರು ಒಳಗೊಳಗೆ ಆಪರೇಷನ್ ಮಾಡಲು ಹೋಗಿ ಸೋತರು. ಇದೀಗ ಬಹಿರಂಗವಾಗಿ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು. ಇನ್ನು ನಮ್ಮ ಸರ್ಕಾರ ಉಳಿಸಿಕೊಳ್ಳುವ ಅನಿವಾರ್ಯತೆ ಬಂದರೆ ಬಿಜೆಪಿ ಶಾಸಕರನ್ನ ಸೆಳೆಯಲು ನಾವು ಬ್ರಹ್ಮಾಸ್ತ್ರ ಪ್ರಯೋಗ ಮಾಡ್ತೀವಿ ಅಂತಾ ಹೇಳಿದ್ದಾರೆ.