ದೋಸ್ತಿ ಸರ್ಕಾರದ ಖೇಲ್ ಖತಂ.. 12 ಶಾಸಕರು ರಾಜೀನಾಮೆ!

471

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇದೀಗ ಬಿರುಗಾಳಿ ಎದ್ದಿದೆ. ದೋಸ್ತಿ ಸರ್ಕಾರ ಸಂಪೂರ್ಣವಾಗಿ ಖೇಲ್ ಖತಂ ಆಗುವ ಸಾಧ್ಯತೆಯಿದೆ. ಬರೋಬ್ಬರಿ 12 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗ್ತಿದೆ. ಸ್ಪೀಕರ್ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಾಗಿದೆ ಅನ್ನೋ ಮಾಹಿತಿ ಬಂದಿದೆ.

17ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಸಲ್ಲಿಸಲು ರೆಡಿಯಾಗಿದ್ದಾರೆ ಎನ್ನಲಾಗ್ತಿದೆ. ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ನಾನು ರಾಜೀನಾಮೆ ನೀಡ್ತಿದ್ದೇನೆ ಅಂತಾ ಮಾಧ್ಯಮದವರ ಮುಂದೆ ಹೇಳಿದ್ದಾರೆ.

ರಮೇಶ ಜಾರಕಿಹೊಳಿ, ಹೆಚ್.ವಿಶ್ವನಾಥ, ಬಿ.ಸಿ ಪಾಟೀಲ, ಶಿವರಾಮ ಹೆಬ್ಬಾರ, ಗೋಪಾಲಯ್ಯ, ನಾರಾಯಣಗೌಡ, ಮಹೇಶ ಕುಮಠಳ್ಳಿ ಸೇರಿ 12 ಜನ ಶಾಸಕರು ರಾಜೀನಾಮೆ ಸ್ಪೀಕರ್ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರಂತೆ.

ಇನ್ನು ಅನೀಲ, ಚಿಕ್ಕಮಾದು, ಅಂಜಲಿ ನಿಂಬಾಳ್ಕರ್, ಕೊಪ್ಪಳದ ಐವರು ಶಾಸಕರು ಹಾಗೂ ರಾಮಲಿಂಗಾ ರೆಡ್ಡಿ ಪುತ್ರಿ ಶಾಸಕ ಸೌಮ್ಯಾ ರೆಡ್ಡಿ ಅವರು ಸಹ ರಾಜೀನಾಮೆ ನೀಡ್ತಾರೆ ಅಂತಾ ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!