ಬೆಂಗಳೂರು: 12 ಮಂದಿ ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗ್ತಿತ್ತು. ಆದ್ರೆ, ಸಚಿವ ಡಿ.ಕೆ ಶಿವಕುಮಾರ ಅವರು ಮುನಿರತ್ನ ರಾಜೀನಾಮೆ ಪತ್ರ ಹರಿದ ಕಾರಣಕ್ಕೆ ಅವರು ನೀಡಿದ ರಾಜೀನಾಮೆ ಇಲ್ಲ. ಹೀಗಾಗಿ 11 ಮಂದಿ ರಾಜೀನಾಮೆ ನೀಡಲಾಗಿದೆ.
ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ರಮೇಶಕುಮಾರ ಅವರು, ನಾನು ನನ್ನ ಕಾರ್ಯವ್ಯಾಪ್ತಿಯ ಒಳಗಡೆ ಕೆಲಸ ಮಾಡುತ್ತೇನೆ. ನನ್ನ ಭೇಟಿಯ ಅನುಮತಿಯನ್ನ ಯಾರೂ ಪಡೆದಿರುವುದಿಲ್ಲ. ಹೀಗಾಗಿ ನಾನು ಕೆಲ ಕಾರ್ಯಕ್ರಮದಿಂದ ಹೊರಗಡೆ ಇದ್ದೇನೆ ಅಂತಾ ಹೇಳಿದ್ದಾರೆ.
ನಾಳೆ ಆಫೀಸ್ ಇರೋದಿಲ್ಲ. ಸೋಮವಾರ ನಿಗಧಿತ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕಾರಣಕ್ಕೆ ಕಚೇರಿಗೆ ಆಗಮಿಸಲು ಆಗ್ತಿಲ್ಲ. ಹೀಗಾಗಿ ಮಂಗಳವಾರ ರಾಜೀನಾಮೆ ಬಗ್ಗೆ, ನನ್ನ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡುತ್ತೇನೆ ಅಂತಾ ಹೇಳಿದ್ದಾರೆ.
ಸಾಲು ಸಾಲು ಶಾಸಕರು ರಾಜೀನಾಮೆ ನೀಡಿರುವುದ್ರಿಂದ ಮುಂದೇನು ಅನ್ನೋ ಟೆನ್ಷನ್ ರಾಜಕೀಯ ನಾಯಕರಲ್ಲಿದೆ. ಹೀಗಾಗಿ ಮಂಗಳವಾರ ದೋಸ್ತಿ ಸರ್ಕಾರಕ್ಕೆ ಮಂಗಳವಾಗುತ್ತಾ? ಬಿಜೆಪಿಗೆ ಮಂಗಳವಾಗುತ್ತಾ ಅನ್ನೋ ಕುತೂಹಲವಿದೆ.