ಸಿಎಂ ಹೇಳಿಕೆ ನಡುವೆಯೇ ವಿವಾದದ ಕಿಡಿ ಹೊತ್ತಿಸಿದ ಯತ್ನಾಳ

490

ವಿಜಯಪುರ: ತಬ್ಲೀಗ್ ಜಮಾತ್ ಕ್ಕೆ ಸಂಬಂಧಿಸಿದಂತೆ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ವಿವಾದಾತ್ಮಕ ಟ್ವೀಟ್ ವೊಂದನ್ನ ಮಾಡಿದ್ದಾರೆ. ತಬ್ಲಿಕ್ ಜಮಾತ್ ದವರು ಸಹಕರಿಸದಿದ್ರೆ ಗುಂಡಿಕ್ಕಿ ಎಂದು ಹೇಳುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದಾರೆ.

ಕರೋನಾ ಹಬ್ಬಿಸುವ ಮತಾಂಧರಿಗೆ ಕೊನೆಯ ಎಚ್ಚರಿಕೆ ನೀಡಿ. ಸಹಕರಿಸದಿದ್ದರೆ ಗುಂಡಿಕ್ಕಿ ಎಂದು ಟ್ವೀಟ್ ಮಾಡಿದ್ದಾರೆ. ನಿಮಗೆ ಇದು ಪ್ರಚೋದನೆ ಎನಿಸಿದರೆ ನನ್ನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಬರೆದಿದ್ದಾರೆ.

https://twitter.com/b_yatnal/status/1247542699651031043?s=20

ಸಿಎಂ ಬಿಎಸ್ ಯಡಿಯೂರಪ್ಪ, ಕೆಲವರು ಮಾಡುವ ತಪ್ಪಿಗೆ ಇಡೀ ಸಮುದಾಯವನ್ನ ಟಾರ್ಗೆಟ್ ಮಾಡುವುದು ಸರಿಯಲ್ಲ. ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ನಿನ್ನೆಯೇ ಹೇಳಿದ್ದಾರೆ. ಇದರ ನಡುವೆ ಅವರ ಪಕ್ಷದ ವಿವಾದಾತ್ಮಕ ಶಾಸಕ ಇದೀಗ ಈ ರೀತಿ ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!