ಲಖ್ನೋ: ಕರೋನಾ ವಿಚಾರಕ್ಕೆ ಸಂಬಂಧಿಸಿದಂತೆ ತಬ್ಲೀಗ್ ಜಮಾತ್ ಸದಸ್ಯರ ವಿರುದ್ಧ ಮಾತ್ನಾಡಿದ್ದಕ್ಕೆ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಕರೇಲಿ ಎಂಬಲ್ಲಿ ಈ ಘಟನೆ ನಡೆದಿದೆ.
ಲಾಕ್ ಡೌನ್ ನಡುವೆಯೂ ಕರೇಲಿ ಎಂಬಲ್ಲಿ ಟೀ ಸ್ಟಾಲ್ ವೊಂದು ಓಪನ್ ಆಗಿದೆ. ಅಲ್ಲಿ ಕರೋನಾ ಸೋಂಕಿನ ಚರ್ಚೆ ನಡೆದಿದೆ. ಈ ವೇಳೆ ಲೌತಾನ್ ನಿಶಾದ್ ಎಂಬಾತ ತಬ್ಲೀಗ್ ಜಮಾತ್ ಬಗ್ಗೆ ಮಾತ್ನಾಡಿದ್ದಾನೆ. ಅವನ್ನ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಆರೋಪಿ ವಿರುದ್ಧ ಭದ್ರತಾ ಕಾಯ್ದೆ ಅಡಿ ಕೇಸ್ ದಾಖಲಾಗಿದೆ. ಲಾಕ್ ಡೌನ್ ನಡುವೆಯೂ ಟೀ ಸ್ಟಾಲ್ ಓಪನ್ ಮಾಡಿದ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.