ಶಾಸಕ ಮನಗೂಳಿ ಗುಣಮುಖರಾಗಲೆಂದು ವಿಶೇಷ ಪೂಜೆ

319

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಶಾಸಕ ಎಂ.ಸಿ ಮನಗೂಳಿ ಅವರ ಆರೋಗ್ಯದಲ್ಲಿ ಒಂದಿಷ್ಟು ಏರುಪೇರು ಕಾಣಿಸಿಕೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗ್ಲೇ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್ ಮಾಡಲಾಗುತ್ತೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಇದರ ನಡುವೆ ಶಾಸಕ ಮನಗೂಳಿ ಅವರ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು, ತಮ್ಮ ನೆಚ್ಚಿನ ನಾಯಕರು ಬೇಗ ಗುಣಮುಖರಾಗಲಿ ಎಂದು, ನಗರದ ಶ್ರೀ ವರದಿಹಸ್ತ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಶ್ರೀ ವರದಿಹಸ್ತ ಹನುಮಾನನ ಪರಮಭಕ್ತರಾಗಿರುವ ಶಾಸಕರು, ಪ್ರತಿ ಶನಿವಾರ ತಪ್ಪದೆ ಇಲ್ಲಿಗೆ ಬರುತ್ತಾರೆ. ಹೀಗಾಗಿ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಮುಖಂಡರು ತಿಳಿಸಿದ್ರು.

ಈ ವೇಳೆ ಜೆಡಿಎಸ್ ಮುಖಂಡರಾದ ಪರಶುರಾಮ ಕಾಂಬಳೆ, ರವಿ ಪಾಟೀಲ, ಶಂಕರಗೌಡ ಪಾಟೀಲ, ಮಲ್ಲು ಶಂಭೇವಾಡ, ಸಲೀಮ ಜುಮನಾಳ,  ರಫೀಕ ಮನೂರ, ಅನ್ನಪೂರ್ಣ ಹೊಟಗಾರ, ಜಯಶ್ರೀ, ನಿಂಗನಗೌಡ ಪಾಟೀಲ, ರವಿಗೌಡ ಪಾಟೀಲ ಹಾಗೂ ಶಾಸಕರ ಆಪ್ತಸಹಾಯಕ ಪ್ರಸನ್ನ ಜೇರಟಗಿ ಸೇರಿ ಅನೇಕರು ಉಪಸ್ಥಿತರಿದ್ರು.




Leave a Reply

Your email address will not be published. Required fields are marked *

error: Content is protected !!