ನವದೆಹಲಿ: ಇಂದು ಭಾರತ್ ಬಂದ್ ಗೆ ಕರೆ ನೀಡಿ ಹೋರಾಟದಲ್ಲಿ ಭಾಗವಹಿಸಿದ ಕಾರ್ಮಿಕರಿಗೆ ಸಂಸದ ರಾಹುಲ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ. ಬಂದ್ ನಲ್ಲಿ ಭಾಗವಹಿಸಿದ 25 ಕೋಟಿಗೂ ಹೆಚ್ಚು ಕಾರ್ಮಿಕರಿಗೆ ನನ್ನ ಅಭಿನಂದನೆಗಳು ಎಂದು ಟ್ವೀಟರ್ ಮೂಲಕ ತಿಳಿಸಿದ್ದಾರೆ. ಅಲ್ದೇ, ಮೋದಿ-ಶಾ ಸರ್ಕಾರ ಜನ ವಿರೋಧಿಯಾಗಿದೆ ಅಂತಾ ಹೇಳಿದ್ದಾರೆ.
ಮೋದಿ-ಶಾ ಸರ್ಕಾರ ಬಂಡವಾಳಶಾಹಿ ಧೋರಣೆಯಿಂದ ದೇಶದಲ್ಲಿ ನಿರುದ್ಯೋಗ ಸೃಷ್ಟಿಯಾಗಿದೆ. ಕೇಂದ್ರದ ಆರ್ಥಿಕ ನೀತಿ, ಬ್ಯಾಂಕಿಂಗ್ ವ್ಯವಸ್ಥೆ, ಬ್ಯಾಂಕ್ ಗಳ ವಿಲೀನ, ಕನಿಷ್ಠ ವೇತನ ನೀಡದೆ ಇರೋದು, ಸಿಎಎ, ಎನ್ಆರ್ ಸಿ ಸೇರಿದಂತೆ ಜನವಿರೋಧಿ ನೀತಿಗಳನ್ನ ಜಾರಿಗೆ ಮಾಡಲಾಗ್ತಿದೆ. ಇದರ ವಿರುದ್ಧ ಹೋರಾಟ ಮಾಡ್ತಿರುವ ಕಾರ್ಮಿಕರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.