ಬೆಂಗಳೂರು: ಚಿಕ್ಕಬಳ್ಳಾಪುರ, ಹುಣಸೂರು, ಹೊಸಕೋಟೆ, ಶಿರಗುಪ್ಪ ಸೇರಿ 6 ನಗರಸಭೆ ಹಾಗೂ ಸಿಂದಗಿ ಪುರಸಭೆ ಮತ್ತು ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಮೈಸೂರು, ಬೆಂಗಳೂರು ಗ್ರಾಮಾಂತರ, ವಿಜಯಪುರ, ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಆಯೋಗ ಪತ್ರ ಬರೆದಿದ್ದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿಯೆಂದು ಸೂಚನೆ ನೀಡಿದೆ. ಸಿಬ್ಬಂದಿ ನೇಮಕ, ವಿದ್ಯುನ್ಮಾನ ಮತಯಂತ್ರ, ಚುನಾವಣಾಧಿಕಾರಿ ನೇಮಕ, ಮತಯಂತ್ರ ಸಂಗ್ರಹಣೆ ಸೇರಿದಂತೆ ಅಗತ್ಯ ಸಿದ್ಧತೆಗಳ ಬಗ್ಗೆ ಜನವರಿ 11ರೊಳಗೆ ವರದಿ ಸಲ್ಲಿಸಲು ಆಯೋಗ ತಿಳಿಸಿದೆ.
ಸಿಂದಗಿ ಪುರಸಭೆ ಸದಸ್ಯರ ಅವಧಿ ಮುಗಿದಿದ್ದು ಮಾರ್ಚ್ 22, 2019ರಲ್ಲಿ. ಅಂದ್ರೆ, ಕಳೆದ 11 ತಿಂಗಳಿನಿಂದ ಚುನಾವಣೆ ನಡೆದಿಲ್ಲ. 23 ವಾರ್ಡ್ ಗಳಿಗೆ ಚುನಾವಣೆ ನಡೆಯಬೇಕಿದೆ.
ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗೆ ತಹಶೀಲ್ದಾರ್ ಅಥವ ಅವರ ಸರಿಸಮಾನ ಹುದ್ದೆಯ ಅಧಿಕಾರಿಯ ನೇಮಕ ಮಾಡಬೇಕು. ನಗರಸಭೆಗೆ ಉಪವಿಭಾಗಾಧಿಕಾರಿ ಸರಿಸಮನಾದ ಹದ್ದೆಯ ಅಧಿಕಾರಿಯನ್ನ ರಿಟರ್ನಿಂಗ್ ಅಧಿಕಾರಿಯಾಗಿ ನೇಮಕ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.